ಮಡಿಕೇರಿ, ಜು. 11: ನಗರದ ಶ್ರೀದಂಡಿನ ಮಾರಿಯಮ್ಮ ದೇವಾಲಯದ 2017-18 ನೇ ಸಾಲಿನ ದಸರಾ ಉತ್ಸವದ ನೂತನ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಬಿ.ಕೆ.ಸುರೇಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಕೆ.ಮೋಹನ್ ಆಯ್ಕೆಯಾಗಿದ್ದಾರೆ.

ಕಾರ್ಯಾಧ್ಯಕ್ಷರಾಗಿ ಟಿ.ಹೆಚ್.ಉದಯಕುಮಾರ್, ಉಪಾಧ್ಯಕ್ಷರುಗಳಾಗಿ ವಿ.ಎ.ಮಂಜುನಾಥ್, ದಿನು, ಚಂದ್ರಶೇಖರ್, ಸಿ.ಎಸ್.ರಂಜಿತ್, ಸಹ ಕಾರ್ಯದರ್ಶಿಗಳಾಗಿ ನಾಗರಾಜು, ಹರೀಶ್, ಖಜಾಂಚಿಗಳಾಗಿ ಸದಾಶಿವ ಶೆಟ್ಟಿ, ಅಭಿಜಿತ್, ಮಧು, ಗೌರವಾಧ್ಯಕ್ಷರುಗಳಾಗಿ ಎಂ.ಎಲ್.ಸತೀಶ್, ಎಂ.ಆರ್.ರಿತಿಕೇಶನ್, ಗೌರವ ಸಲಹೆಗಾರರಾಗಿ ಎಸ್.ಸಿ.ಸುಬ್ರಮಣಿ, ಕೆ.ಎಸ್.ರಮೇಶ್, ಟಿ.ಎಸ್.ಪ್ರಕಾಶ್, ಕವನ್, ಎಸ್.ಸಿ.ಹರೀಶ್, ದೇಜುಶೆಟ್ಟಿ, ರಾಜು, ಡಿ.ಪಿ.ದಯಾನಂದ, ಟಿ.ಆರ್,ದಯಾನಂದ, ಅಲಂಕಾರ ಸಮಿತಿ ಅಧ್ಯಕ್ಷರುಗಳಾಗಿ ಸಂತೋಷ್, ಸತೀಶ್, ಎಂ.ಎಲ್.ಚಂದ್ರು, ಎಂ.ಆರ್.ರತೀಶ್, ಅಮನ್ ರಂಜಿತ್, ಹೆಚ್.ಸಿ.ಪವನ್, ರಂಜಿತ್, ಪ್ರದೀಪ್, ವಿ.ಎ.ರವಿ, ಟಿ.ಎಸ್.ಪ್ರೀತಂ, ಚಲನವಲನ ಸಮಿತಿ ಅಧ್ಯಕ್ಷರುಗಳಾಗಿ ಜೇಮ್ಸ್, ಅಶೋಕ್ ಬಾಬು, ಮಹೇಶ್, ದಿನೇಶ್ ನಾಯರ್, ವಿ.ಜಿ.ಮೋಹನ್, ರಘು, ವಿಜಯ ಕೆ.ಕೆ., ಮೋಹನ್ ಕುಮಾರ್, ಸುಬ್ಬು ಪೂಜಾರಿ, ಮಂಜೇಶ್, ಪಿ.ವಿ.ಆನಂದ್‍ಕುಮಾರ್, ಎಸ್.ಮೋಹನ್ ಹಾಗೂ 120 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಶ್ರೀದಂಡಿನ ಮಾರಿಯಮ್ಮ ದೇವಾಲಯ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.