ಮಡಿಕೇರಿ, ಜು. 12: ಈ ಮಾತನ್ನು ಮುತ್ತಪ್ಪ ಅವರು ಹೇಳಿಲ್ಲ. ಆದರೆ ಅವರ ಸಹೋದರ ಮುದ್ದಪ್ಪ ಫೇಸ್‍ಬುಕ್‍ನಲ್ಲಿ ಈ ಕುರಿತು ಸೂಚನೆ ನೀಡಿದ್ದಾರೆ. ಫೇಸ್‍ಬುಕ್‍ನಲ್ಲಿ ಬರುವ ರಾಜಕೀಯ ಚರ್ಚೆಗಳಿಗೆ ಅಭಿಪ್ರಾಯ ಹಾಕಿರುವ ಇವರು, ಕೊಡಗಿನಲ್ಲೂ ಜಾತಿ ರಾಜಕೀಯ, ಜಾತಿ ಕಾರಣದಿಂದ ಸಹೋದರ ಮುತ್ತಪ್ಪ ಅವರಿಗೆ ಸ್ಪರ್ಧಿಸಲು ಟಿಕೇಟ್ ಸಿಗಲಿಕ್ಕಿಲ್ಲ. ಸಿಗದಿದ್ದರೆ ಅವರೇಕೆ ಸ್ವತಂತ್ರವಾಗಿ ಸ್ಪರ್ಧಿಸಬಾರದು ಎಂದು ಪ್ರಶ್ನಿಸಿದ್ದಾರೆ.

ಶಾಸಕ ಅಭ್ಯರ್ಥಿಯಾಗಿ ಈ ಹಿಂದೆ ಎಂಎಲ್‍ಸಿ ಸ್ಥಾನಕ್ಕೆ ಸ್ಪರ್ಧಿಸಿ ಸೋತ ಚಂದ್ರಮೌಳಿ ಅವರ ಹೆಸರು ಕೇಳಿಬರುತ್ತಿದ್ದು, ಚಂದ್ರಮೌಳಿ ಅವರು ವ್ಯವಸ್ಥೆಗೊಳಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿಜೆಪಿ ನಾಯಕರನ್ನು ಕೂರಿಸಿದುದ್ದನ್ನೂ ಮುದ್ದಪ್ಪ ಫೇಸ್‍ಬುಕ್‍ನಲ್ಲಿ ಪ್ರಶ್ನಿಸಿದ್ದಾರೆ. ಫೇಸ್‍ಬುಕ್‍ನಲ್ಲಿ ನಾಪಂಡ ಮುತ್ತಪ್ಪ ಫಾರ್ ಮಡಿಕೇರಿ ಎಂಎಲ್‍ಎಂ ಎಂಬ ಪುಟ ಚಾಲ್ತಿಯಲ್ಲಿದೆ.