ಮಡಿಕೇರಿ, ಜು. 12: ಕನಾಟಕ ವಿಧಾನಸಭೆಯ ಉಪಾಧ್ಯಕ್ಷರು ಹಾಗೂ ಸಾರ್ವಜನಿಕ ಅರ್ಜಿ ಪರಿಶೀಲನಾ ಸಮಿತಿ ಅಧ್ಯಕ್ಷರೂ ಆಗಿರುವ ಶಿವಶಂಕರ ರೆಡ್ಡಿ ಹಾಗೂ ಸಮಿತಿ ಸದಸ್ಯರು ಮತ್ತು ಶಾಸಕದ್ವಯರಾದ ಎಂ.ಪಿ. ಅಪ್ಪಚ್ಚು ರಂಜನ್, ಕುಣಿಗಲ್ ಶಾಸಕ ನಾಗರಾಜಯ್ಯ ಇವರುಗಳು ಇಂದು ತಲಕಾವೇರಿ- ಭಾಗಮಂಡಲ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.ಕರ್ನಾಟಕದಲ್ಲಿ ಬರ ನಿವಾರಣೆಗಾಗಿ ಕಾವೇರಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಈ ಸಮಿತಿ ಪ್ರಮುಖರು, ಆ ಮೂಲಕ ಉತ್ತಮ ಮಳೆ ಬೆಳೆಯೊಂದಿಗೆ ನಾಡಿನ ಜನತೆ ಮತ್ತು ಜೀವ ಸಂಕುಲವನ್ನು ಸಂಕಷ್ಟಗಳಿಂದ ಪಾರು ಮಾಡುವಂತೆ ಶ್ರೀ ಕಾವೇರಿಯಲ್ಲಿ ಮೊರೆಯಿಟ್ಟರು. ರಾತ್ರಿ ಮಡಿಕೇರಿಯಲ್ಲಿ ತಂಗಿದ ಸಮಿತಿ ಪ್ರಮುಖರು ತಾ. 14ರಂದು ಜಿಲ್ಲೆಯ ಗಡಿ ಕೊಡ್ಲಿಪೇಟೆ ಹಾಗೂ ಹಾಸನದಲ್ಲಿ ಸಾರ್ವಜನಿಕ ಕುಂದುಕೊರತೆ ಪರಿಶೀಲಿಸಿ ಬೆಂಗಳೂರಿಗೆ ಪಯಣಿಸಲಿದೆ.