ಸೋಮವಾರಪೇಟೆ, ಜು. 12: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‍ನ ಸೋಮವಾರಪೇಟೆ ತಾಲೂಕು ಘಟಕವನ್ನು ನೂತನವಾಗಿ ರಚಿಸಲಾಗಿದೆ ಎಂದು ಪರಿಷತ್‍ನ ಜಿಲ್ಲಾಧ್ಯಕ್ಷ ಎಸ್. ಮಹೇಶ್ ತಿಳಿಸಿದ್ದಾರೆ.

ಸೋಮವಾರಪೇಟೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕುಶಾಲನಗರದ ಪಿ. ಮಹದೇವಪ್ಪ, ಕಾರ್ಯದರ್ಶಿಯಾಗಿ ಕುಶಾಲನಗರದ ಎಂ.ಎಸ್.ಗಣೇಶ್ ಆಯ್ಕೆಯಾಗಿದ್ದಾರೆ. ಕೋಶಾಧ್ಯಕ್ಷರಾಗಿ ಶನಿವಾರಸಂತೆ ಅನಂತ್, ಉಪಾಧ್ಯಕ್ಷರುಗಳಾಗಿ ನಂಜರಾಯಪಟ್ಟಣ ಮೋಹನ್, ಶನಿವಾರಸಂತೆ ಬಸವಣ್ಣಿ, ಕಾರ್ಯದರ್ಶಿಯಾಗಿ ಗುಮ್ಮನಕೊಲ್ಲಿ ಎಸ್.ಆರ್. ಶಿವಲಿಂಗ ಅವರನ್ನು ಆಯ್ಕೆಮಾಡಲಾಗಿದೆ.

ನಿರ್ದೇಶಕರುಗಳಾಗಿ ತೊರೆನೂರು ಜಗದೀಶ್, ಶಿರಂಗಾಲ ಚಂದ್ರಶೇಖರ್, ಕುಶಾಲನಗರ ರಂಗಸ್ವಾಮಿ, ಕುಶಾಲನಗರ ಮಧುಸೂಧನ್, ಗುಡ್ಡೆಹೊಸೂರು ಶುಭಶಂಕರ್, ಮಣಜೂರು ಮಂಜುನಾಥ್, ಶಿರಂಗಾಲ ಚೇತನ್, ಸೋಮವಾರಪೇಟೆ ಕುಮಾರ್, ಹೆಬ್ಬುಲುಸೆ ಸಂದೀಪ್, ಮಹಿಳಾ ನಿರ್ದೇಶಕರುಗಳಾಗಿ ತೊರೆನೂರು ಟಿ.ವಿ.ಶೈಲಾ, ಶಿರಂಗಾಲ ಎಸ್.ಕೆ.ಸೌಭಾಗ್ಯ, ಕುಶಾಲನಗರ ನಿರ್ಮಲ, ವಿಶೇಷ ಆಹ್ವಾನಿತರಾಗಿ ಮರೂರು ಉದಯ ಕುಮಾರ್, ಹೆಬ್ಬಾಲೆ ಹೆಚ್.ಪಿ. ಶಿವಪ್ಪ, ಶಿರಂಗಾಲ ಧರ್ಮಪ್ಪ, ಶನಿವಾರಸಂತೆ ಹಾಲಪ್ಪ ಆಯ್ಕೆಯಾಗಿದ್ದಾರೆ.

ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ವಿಶೇಷ ಸಭೆಯಲ್ಲಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅವರು ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಿದರು.