ಶ್ರೀಮಂಗಲ, ಜು. 19 : ಹುದಿಕೇರಿ ಸಮೀಪ ಆಟೋ ಹಾಗೂ ಜೀಪು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋ ಚಾಲಿಸುತ್ತಿದ್ದ ಬಿರುನಾಣಿಯ ರೋಶನ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಗೋಣಿಕೊಪ್ಪ ಕಡೆಯಿಂದ ಬಿರುನಾಣಿ ಕಡೆಗೆ ತೆರಳುತ್ತಿದ್ದ ಆಟೋ ಹಾಗೂ ಹುದಿಕೇರಿಯಿಂದ ಗೋಣಿಕೊಪ್ಪ ಕಡೆಗೆ ಜೀಪು ತೆರಳುತ್ತಿದ್ದ ಹಾಗೂ ವೇಳೆ ಹುದಿಕೇರಿ ಸಮೀಪ 7ನೇ ಮೈಲಿನಲ್ಲಿ ಮುಖಾಮುಖಿ ಅಪಘಾತ ಸಂಭವಿಸಿದೆ. ಆಟೋದಲ್ಲಿ ಇತರ ಪ್ರಯಾಣಿಕರು ಇದ್ದರಾದರೂ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಹುದಿಕೇರಿ ಪೊಲೀಸ್ ಉಪಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.