ಗೋಣಿಕೊಪ್ಪಲು, ಜು. 19: ಕ್ಷಿಪ್ರ ಕಾರ್ಯ ಪಡೆ ವತಿಯಿಂದ ಮಾಯಮುಡಿ, ಧನುಗಾಲ ಹಾಗೂ ದೇವರಪುರ ಗ್ರಾಮಗಳಲ್ಲಿ ಬೀಡುಬಿಟ್ಟಿದ್ದ ಐದು ಕಾಡಾನೆಗಳನ್ನು ಮತ್ತೆ ಕಾಡಿಗೆ ಅಟ್ಟಲಾಯಿತು.

ಹಲವು ದಿನಗಳಿಂದ ಗ್ರಾಮಗಳಲ್ಲಿ ಸೇರಿಕೊಂಡು ಕೃಷಿ ಚಟುವಟಿಕೆಗೆ ತೊಡಕ್ಕಾಗಿದ್ದ ಆನೆಗಳನ್ನು ದೇವರಪುರದ ಹೆಬ್ಬಾಲೆ ಕಾಡಿನ ಮೂಲಕ ತಿತಿಮತಿ ಅರಣ್ಯಕ್ಕೆ ತಿತಿಮತಿ ವಲಯ ಅರಣ್ಯ ಇಲಾಖೆಯ ಕಾರ್ಯಪಡೆ ಮೂಲಕ ಕಾಡು ಸೇರುವಂತಾಯಿತು.