ಪಾಲಿಬೆಟ್ಟ ಗ್ರಾಮದ ಮಾಜಿ ಎಂಎಲ್‍ಸಿ ಹಾಗೂ ನೆಲ್ಲಿಕಾಡು ತೋಟದ ಮಾಲೀಕರು, ದಿ. ಅಜ್ಜಿಕುಟ್ಟೀರ ಎ.ಎನ್. ಸೋಮಯ್ಯ ಅವರ ಪತ್ನಿ ಜೆಡಿಎಸ್ ಮುಖಂಡ ಅಜ್ಜಿಕುಟ್ಟೀರ ಶಾಂತು ಅಪ್ಪಯ್ಯ ಅವರ ಮಾತೃಶ್ರೀ ಪಾರ್ವತಿ ಸೋಮಯ್ಯ (90) ಅವರು ತಾ. 22 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. 23 ರಂದು (ಇಂದು) 3 ಗಂಟೆಗೆ ಸ್ವಗ್ರಾಮದಲ್ಲಿ ನಡೆಯಲಿದೆ. ಮೃತರು ಆರು ಮಂದಿ ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸಂತಾಪ: ಜೆಡಿಎಸ್ ಮುಖಂಡ ಶಾಂತು ಅಪ್ಪಯ್ಯ ಅವರ ಮಾತೃಶ್ರಿ ಪಾರ್ವತಿ ಸೋಮಯ್ಯ ಅವರ ನಿಧನಕ್ಕೆ ಮಾಜಿ ಎಂಎಲ್‍ಸಿ ಎಂ.ಸಿ. ನಾಣಯ್ಯ, ಜೆಡಿಎಸ್ ಪ್ರಮುಖರಾದ ಎಂ.ಎ. ರಮೇಶ್, ಎಂ.ಪಿ. ಮುತ್ತಪ್ಪ, ಮುನೀರ್ ಅಹಮದ್, ಕೆ.ಕೆ. ನಾಗರಾಜ್, ಬೈ.ಶ್ರಿ. ಪ್ರಕಾಶ್, ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಕೇಶವಕಾಮತ್ ಸಂತಾಪ ವ್ಯಕ್ತಪಡಿಸಿದ್ದಾರೆ.