ಸೋಮವಾರಪೇಟೆ, ಜು. 23: ನಗರದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಆಷಾಢÀ ಮಾಸದ ಅಂಗವಾಗಿ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯಿತು.ಆಷಾಡ ಮಾಸದ ಕೊನೆಯ ಶುಕ್ರವಾರ ದೇವಾಲಯದ ಶಕ್ತಿ ಪಾರ್ವತಿ ದೇವಿ ಸನ್ನಿದಾನದಲ್ಲಿ ಇಂದು ಬೆಳಗ್ಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಅರ್ಚಕರಾದ ಪ್ರಸನ್ನ ಅವರ ಪೌರೋಹಿತ್ವದಲ್ಲಿ ಜಗದೀಶ ಹಾಗು ಶ್ಯಾಂಪ್ರಸಾದ್ ಅವರುಗಳು ದೇವಿಗೆ ಅಭಿಷೇಕ, ಲಲಿತ ಸಹಸ್ರನಾಮಾರ್ಚನೆ, ಪುಷ್ಪಾರ್ಚನೆ ಸೇರಿದಂತೆ ವಿವಿಧ ಪೂಜೆ ನಡೆಯಿತು.

ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪೂಜಾಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ನಿಂಬೆಹಣ್ಣು ಹಾಗು ಅಚ್ಚುಬೆಲ್ಲದ ದೀಪಗಳಿಂದ ದೇವಿಗೆ ಆರತಿ ಮಾಡಿದರು. ಮಧ್ಯಾಹ್ನ ಮಹಾ ಮಂಗಳಾರತಿಯ ನಂತರ ಪ್ರಸಾದ ವಿನಿಯೋಗ ನೆರವೇರಿತು.