ಮಡಿಕೇರಿ, ಜು. 27: ಜಿಲ್ಲೆಯ ರೆಸಾಟ್ರ್ಸ್, ಹೊಟೇಲ್ ಹಾಗೂ ಉಪಾಹಾರ ಗೃಹಗಳಿಗೆ ಸರಕು ಹಾಗೂ ಸಾಗಾಟ ಕುರಿತ ಕಾರ್ಯಾಗಾರ ತಾ. 29 ರಂದು ಮಡಿಕೇರಿಯಲ್ಲಿ ನಡೆಯಲಿದೆ. ಕೊಹಿನೂರು ರಸ್ತೆಯಲ್ಲಿರುವ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಕಟ್ಟಡದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರೀಯ ಅಬಕಾರಿ ಸುಂಕ (ಜಿಎಸ್‍ಟಿ) ಇಲಾಖೆಯ ಜಂಟಿ ಕಮಿಷನರ್ ರವಿಕಿರಣ್ ಹಾಗೂ ಸೂಪರಿಂಟೆಂಡೆಂಟ್ ಎಸ್. ವೆಂಕಟೇಶ್ ಇವರುಗಳು ಪಾಲ್ಗೊಳ್ಳಲಿದ್ದಾರೆ.

ಕೊಡಗು ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಕಾರ್ಯಕ್ರಮವನ್ನು ಆಯೋಜಿಸಿರುವದಾಗಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.