ಮಡಿಕೇರಿ, ಜು. 27: ಕರ್ನಾಟಕ ರಾಜ್ಯ ವಿಧಾನ ಪರಿಷತ್‍ನ ಶಾಸಕ ಎಂ.ಪಿ ಸುನಿಲ್ ಸುಬ್ರಮಣಿ ರವರು ಇಂದು ವೀರಾಜಪೇಟೆ ತಾಲೂಕಿನ ಪೆರುಂಬಾಡಿಯಲ್ಲಿ ಮಳೆಯಿಂದ ಹಾನಿಯಾದ ರಸ್ತೆ ಜೋಡಣಾ ಕಾರ್ಯದ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಹಾಗೂ ಅಂತರ ರಾಜ್ಯದಿಂದ ಬರುವ ಪ್ರಯಾಣಿಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಹಕರಿಸಲು ಮನವಿ ಮಾಡಿದರು, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಹಾಗೂ ಗುತ್ತಿಗೆದಾರ ವಿನು ಅವರೊಂದಿಗೆ ಸಮಾಲೋಚಿಸಿ, ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಕಳಪೆಯಾಗದಂತೆ ನಿಗಾವಹಿಸಿ ಆದಷ್ಟು ಬೇಗ ಮುಗಿಸಿ ಸಂಚಾರಕ್ಕೆ ಅನುವು ಮಾಡಿಕೊಡÀಲು ಸೂಚಿಸಿದರು. ಪಕ್ಕದಲ್ಲಿರುವ ಕೆರೆಯ ನೀರು ಹರಿದು ಹೋಗಲು ಬದಲೀ ವ್ಯವಸ್ಥೆ ಮಾಡಲು ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕ ರೊಂದಿಗೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಲೋಕೇಶ್, ಸಾಯಿನಾಥ್, ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ರಾಜ್ಯ ಯುವ ಬಿಜೆಪಿ ಕಾರ್ಯದರ್ಶಿ ಶಶಾಂಕ್ ಭೀಮಯ್ಯ ಮುಂತಾದವರಿದ್ದರು.