ಕುಶಾಲನಗರ, ಜು. 29: ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ನಡೆಯಿತು. ಸ್ಥಳೀಯ ಕನ್ನಡಭಾರತಿ ಕಾಲೇಜು ಆವರಣದಲ್ಲಿ ನಡೆದ ಸಮಾರಂಭವನ್ನು ಕುಶಾಲನಗರ ಪೊಲೀಸ್ ಉಪ ಅಧೀಕ್ಷಕರಾದ ಸಂಪತ್‍ಕುಮಾರ್ ಉದ್ಘಾಟಿಸಿದರು. ಪತ್ರಕರ್ತರು ನೇರ, ನಿಷ್ಠುರವಾಗಿ ವಾಸ್ತವಾಂಶಗಳನ್ನು ವರದಿ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂದು ಅವರು ಕರೆ ನೀಡಿದರು.

ಟ್ರಸ್ಟ್‍ನ ಅಧ್ಯಕ್ಷರಾದ ಹೆಚ್.ಎಂ.ರಘು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡರಾದ ಜಿ.ಎಲ್.ನಾಗರಾಜ್, ಟ್ರಸ್ಟ್‍ನ ಸಂಸ್ಥಾಪಕರಾದ ಆರ್.ಎಸ್.ಕಾಶಿಪತಿ, ಗೌರವಾಧ್ಯಕ್ಷರಾದ ಟಿ.ಆರ್.ಪ್ರಭುದೇವ್, ಉದ್ಯಮಿ ಕೆ.ಕೆ.ಮಂಜುನಾಥ್‍ಕುಮಾರ್, ಅಬ್ದುಲ್ ಸಲಾಂ, ಉಪನ್ಯಾಸಕ ಪುಟ್ಟರಾಜು ಉಪಸ್ಥಿತರಿದ್ದರು.

ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪೊಲೀಸ್ ಉಪ ಅಧೀಕ್ಷಕ ಸಂಪತ್‍ಕುಮಾರ್, ಪತ್ರಕರ್ತ ರವಿಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಅವರುಗಳನ್ನು ಸನ್ಮಾನಿಸಲಾಯಿತು.