ಮಡಿಕೇರಿ, ಜು. 31: ಕೊಡಗು ಜಿಲ್ಲೆಯ ವಿವಿಧ ಠಾಣೆ ಮತ್ತು ಜಿಲ್ಲಾ ನಿಸ್ತಂತು ಕೇಂದ್ರ ಹಾಗೂ ಡಿ.ಎ.ಆರ್.ನಲ್ಲಿ ಸೇವೆ ಸಲ್ಲಿಸಿದ ಆರು ಮಂದಿ ಅಧಿಕಾರಿಗಳು ಪೊಲೀಸ್ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಇವರನ್ನು ಜಿಲ್ಲಾ ಪೊಲೀಸ್ ಕಚೇರಿಯಿಂದ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪೊಲೀಸ್ ಅಧೀಕ್ಷಕರ ಅನುಪಸ್ಥಿತಿಯಲ್ಲಿ ಮಡಿಕೇರಿ ಡಿವೈಎಸ್‍ಪಿ ಸುಂದರ್ ರಾಜ್ ಸನ್ಮಾನಿಸಿ, ಗೌರವಿಸಿ ಬೀಳ್ಕೊಟ್ಟರು.

ಎಂ. ರುದ್ರಪ್ಪ- ಪಿ.ಎಸ್.ಐ. ನಿಸ್ತಂತು ಕೇಂದ್ರ, ತಿಮ್ಮಶೆಟ್ಟಿ- ಎ.ಆರ್.ಎಸ್.ಐ. ಜಿಲ್ಲಾ ಸಶಸ್ತ್ರ ದಳ, ಜಿ.ಎಸ್. ಜೋಯಪ್ಪ- ಎ.ಎಸ್.ಐ. ಮಡಿಕೇರಿ ನಗರ ಠಾಣೆ, ಕೆ.ಎಸ್. ಬಸಪ್ಪ-ಎ.ಆರ್.ಎಸ್.ಐ. ಜಿಲ್ಲಾ ಸಶಸ್ತ್ರ ದಳ, ಎನ್. ಪೆರುಮಾಳ್- ಎ.ಆರ್.ಎಸ್.ಐ. ಜಿಲ್ಲಾ ಸಶಸ್ತ್ರ ದಳ, ನಾರಾಯಣ ಗೌಡ- ಮುಖ್ಯಪೇದೆ ಶನಿವಾರಸಂತೆ ಠಾಣೆ ಇವರುಗಳನ್ನು ಬೀಳ್ಕೊಡಲಾಯಿತು.