ವೀರಾಜಪೇಟೆ, ಜು. 31: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸಿ.ಎಂ. ನಾಚಪ್ಪ ವಹಿಸಿದ್ದರು. ಇದೇ ಕಾಲೇಜಿನ ಉಪನ್ಯಾಸಕ ತನ್ವೀರ್ ಹಾಗೂ ಕಾರ್ಯಕ್ರಮ ದಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕಿ ರೇಖಾ ಭಾಗಿಯಾಗಿದ್ದರು.ಉಪನ್ಯಾಸದ ಸಮಯದಲ್ಲಿ ಮಾತನಾಡಿದ ಅವರು ಲೇಖನಿಗೆ ಖಡ್ಗಕ್ಕಿಂತ ಶಕ್ತಿ ಇದೆ. ನಾವು ಕಷ್ಟ ಪಟ್ಟು ಕಲಿತರೆ ಯಾವ ಕೆಲಸವೂ ಅಸಾಧÀ್ಯವಾಗುವದಿಲ್ಲ ಎಂಬದನ್ನು ಕೆಲವು ಉದಾಹರಣೆ ಮೂಲಕ ತಿಳಿಸಿದರು.

ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಜರಿದ್ದರು. ಸ್ವಾಗತವನ್ನು ಚಾಯ ನಿರ್ವಹಿಸಿದರು. ವಂದನಾರ್ಪಣೆಯನ್ನು ವಿದ್ಯಾ ನೆರವೇರಿಸಿದರು