ವೀರಾಜಪೇಟೆ, ಜು. 31: ವೀರಾಜಪೇಟೆ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಮಾಳೇಟಿರ ಎಂ.ಬೆಲ್ಲು ಬೋಪಯ್ಯ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಚಿಲ್ಲವಂಡ ಪಿ.ಕಾವೇರಪ್ಪ ಅವರು ರಾಜೀನಾಮೆ ನೀಡಿದ್ದರಿಂದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಆಯ್ಕೆ ನಡೆದಿದೆ.ಸಂಘದ ಉಪಾಧ್ಯಕ್ಷ ಚೇನಂಡ ಈ.ಗಿರೀಶ್ ಪೂಣಚ್ಚ, ಕಾರ್ಯದರ್ಶಿ ಮೂಕಚಂಡ ಬಿ.ಅರುಣ್ ಅಪ್ಪಣ್ಣ, ಸಹ ಕಾರ್ಯದರ್ಶಿ ಮುಲ್ಲೇಂಗಡ ಸಿ. ಅಶೋಕ್, ಕೋಶಾಧಿಕಾರಿ ಕೋಟೆರ ಯು.ಗಣೇಶ್ ತಮ್ಮಯ್ಯ, ನಿರ್ದೇಶಕರುಗಳಾದ ಮುಂಡ್ಯೋಳಂಡ ಕುಸುಮ ಸೋಮಣ್ಣ, ಚೇನಂಡ ಎಂ.ಸುರೇಶ್ ನಾಣಯ್ಯ, ಚಿಲ್ಲವಂಡ ಪಿ.ಕಾವೇರಪ್ಪ, ಅಪ್ಪನೆರವಂಡ ಎಂ.ಜೋಯಪ್ಪ, ಎಂ. ರಾಣು ಮಂದಣ್ಣ, ಪುಗ್ಗೆರ ಎಸ್.ನಂದ, ಬೊಳ್ಳಪಂಡ ಎಂ.ಸುರೇಶ್, ಮುಕ್ಕಾಟಿರ ರಾಯ್ ಬಿದ್ದಪ್ಪ, ಮಳವಂಡ ಜಿ.ಪೂಣಚ್ಚ ಸಭೆಯಲ್ಲಿ ಉಪಸ್ಥಿತರಿದ್ದರು.