ಪೊನ್ನಂಪೇಟೆ, ಜು. 30: ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ವೀರಾಜಪೇಟೆ-ಗೋಣಿಕೊಪ್ಪಲು ಮುಖ್ಯ ರಸ್ತೆ ಬದಿಯಲ್ಲಿರುವ ನಿವೃತ್ತ ಮೇ.ಜ. ಕೆ.ಪಿ. ನಂಜಪ್ಪ ಅವರ ಭತ್ತದ ಗದ್ದೆಯಲ್ಲಿ ಭಾನುವಾರ ನಡೆದ 5ನೇ ರಾಜ್ಯ ಮಟ್ಟದ ನಿಸರ್ಗ ಜೇಸಿ ಕೆಸರು ಗದ್ದೆ ಕ್ರೀಡಾಕೂಟ- 2017ರ ಭಾಗವಾಗಿ ನಡೆದ ಓಟದ ಸ್ಪರ್ದೆಯಲ್ಲಿ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಿಂದ ನೂರಕ್ಕೂ ಮೀರಿದ ಸ್ಪರ್ಧಾಳುಗಳು ಭಾಗವಹಿಸಿ ಕ್ರೀಡಾ ಪ್ರೇಮ ಮೆರೆದರು.

ಕ್ರೀಡಾಕೂಟದ ಪುರುಷರ ವಿಭಾಗದ ಮುಕ್ತ ಓಟದ ಸ್ಪರ್ಧೆಯಲ್ಲಿ ಕುಂಜಿಲದ ಮಜೀದ್ ಪ್ರಥಮ, ಚೇಲಾವರದ ಗಗನ್ ದ್ವಿತೀಯ ಮತ್ತು ಗೋಣಿಕೊಪ್ಪಲಿನ ಅರುಣ್ ತೃತೀಯ ಬಹುಮಾನ ಪಡೆದರು.

ಮಹಿಳೆಯರ ವಿಭಾಗದ ಮುಕ್ತ ಓಟದ ಸ್ಪರ್ಧೆಯಲ್ಲಿ ಬಿ.ಶೆಟ್ಟಿಗೇರಿಯ ಲಸಿತಾ ಗಣಪತಿ ಪ್ರಥಮ, ಬಿಟ್ಟಂಗಾಲದ ಎಸ್.ಹೆಚ್. ಸುಪ್ರಿಯಾ ದ್ವಿತೀಯ ಹಾಗೂ ಬಿ.ವಿ. ನವ್ಯಶ್ರೀ ತೃತೀಯ ಸ್ಥಾನ ಪಡೆದಿದ್ದಾರೆ.

1ನೇ ತರಗತಿಯಿಂದ 5ನೇ ತರಗತಿವರೆಗಿನ ಸಬ್ ಜೂನಿಯರ್ ಬಾಲಕರ ಓಟದ ಸ್ಪರ್ಧೆಯಲ್ಲಿ ಹಾತೂರು ಜಿ.ಎಂ.ಪಿ. ಶಾಲೆಯ ಮನೋಜ್ ಪ್ರಥಮ, ಹೆಗ್ಗಳ ಜಿ.ಎಂ.ಪಿ. ಶಾಲೆಯ ಕೌಶಿಕ್ ದ್ವಿತೀಯ, ಅರುವತ್ತೋಕ್ಲು ಸರ್ವದೈವತಾ ಶಾಲೆಯ ಅರವಿನ್ ಮಾಚಯ್ಯ ತೃತೀಯ, ಬಾಲಕಿಯರ ವಿಭಾಗದಲ್ಲಿ ವಿರಾಜಪೇಟೆ ಪ್ರಗತಿ ಶಾಲೆಯ ಮಾನ್ಯ ಮುತ್ತಮ್ಮ ಪ್ರಥಮ, ಗೋಣಿಕೊಪ್ಪಲು ಲಯನ್ಸ್ ಶಾಲೆಯ ನಿಶಿರಾ ಮೊಣ್ಣಪ್ಪ ದ್ವಿತೀಯ ಬಹುಮಾನ ಗಿಟ್ಟಿಸಿಕೊಂಡರು.

6ನೇ ತರಗತಿಯಿಂದ 9ನೇ ತರಗತಿವರೆಗಿನ ಜೂನಿಯರ್ ಬಾಲಕರ ವಿಭಾಗದಲ್ಲಿ ಗೋಣಿಕೊಪ್ಪಲು ಸಂತ ಥೋಮಸ್ ಶಾಲೆಯ ಜಿಜಿತ್ ಪ್ರಥಮ, ಹಾತೂರು ಪ್ರೌಢಶಾಲೆಯ ಗಿರೀಶ್ ದ್ವಿತೀಯ ಮತ್ತು ಅರಮೇರಿ ಎಸ್.ಎಂ.ಎಸ್. ಶಾಲೆಯ ಅಭಿಷೇಕ್ ಮುತ್ತಣ್ಣ ತೃತೀಯ, ಬಾಲಕೀಯರ ವಿಭಾಗದಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ ಗಾನವಿ ಬೋಪಣ್ಣ ಪ್ರಥಮ, ವಿರಾಜಪೇಟೆ ಕಾವೇರಿ ಶಾಲೆಯ ಗಾಯನ ಬೋಪಣ್ಣ ದ್ವಿತೀಯ, ಗೋಣಿಕೊಪ್ಪಲು ಲಯನ್ಸ್ ಶಾಲೆಯ ಕ್ಷೀರಾ ಮೊಣ್ಣಪ್ಪ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

10ರಿಂದ ದ್ವಿತೀಯ ಪಿ.ಯು.ಸಿ.ವರೆಗಿನ ಸೀನಿಯರ್ ಬಾಲಕರ ವಿಭಾಗದಲ್ಲಿ ಮೂರ್ನಾಡು ಪದÀವಿ ಪೂರ್ವ ಕಾಲೇಜಿನ ಶಫೀಕ್ ಪ್ರಥಮ, ಹಾತೂರು ಪ್ರೌಢಶಾಲೆಯ ಶರತ್ ದ್ವಿತೀಯ, ಮೂರ್ನಾಡು ಪದÀವಿ ಪೂರ್ವ ಕಾಲೇಜಿನ ಸುಹೈಬ್ ತೃತೀಯ, ಬಾಲಕಿಯರ ವಿಭಾಗದಲ್ಲಿ ವಿರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಾದ ಎನ್.ಎನ್. ನಿಕಿತಾ ಪ್ರಥಮ, ಪ್ರಿಯಾ ದ್ವಿತೀಯ ಮತ್ತು ಟಿ. ಎಸ್. ಮೇಘನಾ ತೃತೀಯ ಬಹುಮಾನ ಪಡೆದುಕೊಂಡರು.

ವಿಜೇತರಿಗೆ ವೇದಿಕೆಯಲ್ಲಿ ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಮಳೆನೀರು ಕೊಯ್ಲು ತಜ್ಞ ಅಜ್ಜಿಕುಟ್ಟಿರ ಸೂರಜ್, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಎಸ್. ಸುರೇಶ್, ಅಖಿಲ ಭಾರತ ವೀರಶೈವ ಮಹಾಸಭಾ ವೀರಾಜಪೇಟೆ ತಾಲೂಕು ಘಟಕ ಅಧ್ಯಕ್ಷ ಕೆ.ಎನ್. ಸಂದೀಪ್ ಸೇರಿದಂತೆ ಪ್ರಮುಖರು ಬಹುಮಾನ ವಿತರಿಸಿ ಶುಭ ಹಾರೈಸಿದರು.