ಕುಶಾಲನಗರ, ಜು. 31: ಕುಶಾಲನಗರದ ಶಾರದ ಮಹಿಳಾ ಪತ್ತಿನ ಸಹಕಾರ ಸಂಘ 2016-17ನೇ ಸಾಲಿನಲ್ಲಿ ಒಟ್ಟು 14 ಲಕ್ಷ ರೂಪಾಯಿಗಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷೆ ಶಾಂತ ಶ್ರೀಪತಿ ತಿಳಿಸಿದ್ದಾರೆ. ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂಘದಲ್ಲಿ ಹಾಲಿ 901 ಮಂದಿ ಸದಸ್ಯರಿದ್ದು 31 ಲಕ್ಷದ 50 ಸಾವಿರ ಪಾಲು ಬಂಡವಾಳ ಸಂಗ್ರಹವಾಗಿದೆ. 83 ಲಕ್ಷದಷ್ಟು ನಿರಖು ಠೇವಣಿ, ಶೇಕಡ ನೂರರಷ್ಟು ಸಾಲ ವಸೂಲಿಯ ಸಾಧನೆಯನ್ನು ಸಂಘ ನಿರ್ವಹಿಸಿದೆ ಎಂದರು.

ಸಂಘವು ಲಾಭದ ಹಾದಿಯಲ್ಲಿರುವ ಹಿನ್ನಲೆಯಲ್ಲಿ ಸದಸ್ಯರಿಗೆ ಶೇ 20ರಷ್ಟು ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ ಎಂದರು.

ಸಂಘದ ಕಾನೂನು ಸಲಹೆಗಾರ ಟಿ.ಎಸ್. ನೇಮಿರಾಜ್, ನಿರ್ದೇಶಕರಾದ ಆಶಾ ಅಶೋಕ್, ಉಮಾರಾಜ್, ಮಂಜುಳಾ ನಾಗೇಂದ್ರ ಗುಪ್ತಾ, ಛಾಯಾ ಗೋಪಿನಾಥ್, ಮೋಕ್ಷಲಕ್ಷ್ಮಿ ನಾರಾಯಣ. ಇಂದಿರಾ ತಿಮ್ಮಪ್ಪ, ಸುಶೀಲಾ ಸ್ವಾಮಿ, ಸುನಿತಾ ವಿಮಲ್, ರೇಖಾ ಕಮಲೇಶ್, ವ್ಯವಸ್ಥಾಪಕಿ ನಳಿನಿ ಜೆ. ಸಭೆಯಲ್ಲಿದ್ದರು.