ಸೋಮವಾರಪೇಟೆ, ಜು.30: ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲು ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ಥಳೀಯ ಕವಿಗಳಿಂದ ಕವಿಗೋಷ್ಠಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕವಿಗೋಷ್ಠಿಯಲ್ಲಿ ನ.ಲ. ವಿಜಯ, ಎಂ.ಎ. ರುಬೀನಾ, ರಾಚು ಶ್ಯಾಂ, ಉಪ ಪ್ರಾಂಶುಪಾಲ ತಳವಾರ್ ಅವರುಗಳು ಕವನ ವಾಚಿಸಿದರು. ನ.ಲ. ವಿಜಯ ಅವರು ಕವನ ರಚನೆ, ಕವಿತೆಗಳಲ್ಲಿ ಸಾಹಿತ್ಯ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಮಹದೇವಮ್ಮ, ಮಮತ, ಆಯಿಷಾ, ಕುಮಾರ್, ಜಯಣ್ಣ ಅವರುಗಳು ಉಪಸ್ಥಿತರಿದ್ದರು.