ಮಡಿಕೇರಿ, ಜು. 30: ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿ ತೀವ್ರ ಗಾಯಗೊಳಿಸಿರುವ ಆರೋಪ ಮೇರೆಗೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಹಾಕತ್ತೂರು ತೊಂಬತ್ತುಮನೆ ನಿವಾಸಿಗಳಾದ ವಿನೋದ್, ರುದ್ರೇಶ್, ಶಿವಕುಮಾರ್ ಎಂಬವರ ಮೇಲೆ ದೊಣ್ಣೆಯಿಂದ ಥಳಿಸಿದ್ದಲ್ಲದೆ ಜಾತಿ ನಿಂದನೆಗೈದಿರುವ ಮೇರೆಗೆ, ಆರೋಪಿಗಳಾದ ನವೀನ್, ಲೋಕೇಶ, ದೀಪು ಅಲಿಯಾಸ್ ದಕ್ಷತ್ ಎಂಬವರ ವಿರುದ್ಧ ಮೊಕದ್ದಮೆಯೊಂದಿಗೆ ಬಂಧಿಸಲಾಗಿದೆ.

ನಿನ್ನೆ ಸಂಜೆ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಮೂವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿಗಳನ್ನು 15 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮಡಿಕೇರಿ ಉಪ ವಿಭಾಗದ ಡಿವೈಎಸ್‍ಪಿ ಕೆ.ಎಸ್. ಸುಂದರಾಜ್ ಅವರು ತನಿಖೆಯೊಂದಿಗೆ ಕ್ರಮಕೈಗೊಂಡಿದ್ದಾರೆ.