*ಸಿದ್ದಾಪುರ, ಆ. 1: ಗದ್ದೆಯಲ್ಲಿ ತುಂಡಾಗಿ ಬಿದ್ದಿದ ವಿದ್ಯುತ್ ತಂತಿ ತುಳಿದ ಪರಿಣಾಮ ವಿದ್ಯುತ್ ಸ್ಪರ್ಶಗೊಂಡು ಹಸುವೊಂದು ಸಾವನ್ನಾಪ್ಪಿರುವ ಘಟನೆ ಅಭ್ಯತ್‍ಮಂಗಲದಲ್ಲಿ ನಡೆದಿದೆ.

ಅಭ್ಯತ್‍ಮಂಗಲ ನಿವಾಸಿ ಪತ್ರಕರ್ತ ಅಂಚೆಮನೆ ಸುಧಿ ಅವರಿಗೆ ಸೇರಿದ ಹಾಲು ಕರೆಯುವ, ಇದೀಗ 4 ತಿಂಗಳ ಗರ್ಭ ದರಿಸಿದ್ದ 4 ವರ್ಷ ಪ್ರಾಯದ ಜರ್ಸಿ ತಳಿಯ ಹಸುವನ್ನು ಹಾಲು ಕರೆದ ಬಳಿಕ ಕಾರ್ಮಿಕ ಗಣೇಶ್ ಎಂಬಾತ ಗದ್ದೆಯಲ್ಲಿ ಮೇಯಲು ಕಟ್ಟಲೆಂದು ಕರೆದೊಯ್ಯುತ್ತಿರುವಾಗ ಹಸು ಒಮ್ಮೆಲೆ ಕುಸಿದು ಬಿದ್ದಿದೆ. ಗಾಬರಿಯಿಂದ ಕಾರ್ಮಿಕ ಗಣೇಶ್ ವಿದ್ಯುತ್ ತಂತಿಗೆ ಎಡವಿ ಬಿದ್ದಿರಬಹುದೆಂದು ತಿಳಿದು ತಂತಿಯನ್ನು ಬದಿಗೆ ಸರಿಸಲು ಮುಟ್ಟಿದ್ದಾನೆÉ. ಈ ಸಂದರ್ಭ ಆತನಿಗೂ ಶಾಕ್ ಹೊಡೆದು ಆತ ಓಡಿದ್ದಾನೆ. ಆದರೆ ಗರ್ಭವತಿಯಾಗಿದ್ದ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ. ಘಟನೆ ಬೆಳಿಗ್ಗೆ 8 ಗಂಟೆಗೆ ಸಂಭವಿಸಿದ್ದು, ಸ್ವಲ್ಪ ತಡವಾಗಿದಿದ್ದರೆ ಗದ್ದೆ ಕೆಲಸಕ್ಕೆ ಆಗಮಿಸುವ ಕಾರ್ಮಿಕರಿಗೆ ಸ್ಪರ್ಶಗೊಂಡು ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಸ್ಪರ್ಶಕ್ಕೆ ಚೆಟ್ಟಳ್ಳಿ ಉಪಠಾಣೆ ಸಿಬ್ಬಂದಿ ಅನಿಲ್, ಸೆಸ್ಕ್ ಅಭಿಯಂತರ ದಿನೇಶ್, ಪಶುವೈದ್ಯಕೀಯ ಇಲಾಖೆಯ ವೈದ್ಯಾಧಿಕಾರಿ ಡಾ. ಶಿಂಧೆ, ನಿರೀಕ್ಷಕ ಲಿಂಗರಾಜು ಭೇಟಿ ನೀಡಿ ಪರಿಶೀಲಿಸಿದರು.