ಕೂಡಿಗೆ, ಆ. 1: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾಗಿರುವ ಹಾರಂಗಿ ಜಲಾಶಯ ಈ ಸಾಲಿನಲ್ಲಿ ಕಡಿಮೆ ಪ್ರಮಾಣದ ಮಳೆಯ ನಡುವೆಯೂ ಜುಲೈ ಅಂತ್ಯದಲ್ಲಿ ಸುರಿದ ಮಳೆಯಿಂದ ಭರ್ತಿಯಾಗಿತ್ತು. ಜಲಾಶಯ ತುಂಬಿದೊಡನೆ ಸರಕಾರದ ಆದೇಶದನ್ವಯ ಅಧಿಕಾರಿಗಳು ನದಿಗೆ ಹೆಚ್ಚುವರಿ ನೀರನ್ನು ಹರಿಸುತ್ತಿದ್ದಾರೆ. ಆದರೆ, ನಾಲೆಗೆ ಹರಿಸುವ ಚಿಂತನೆ ಸರಕಾರಕ್ಕೆ ಇದುವರೆಗೂ ಆಗಿಲ್ಲ. ಅಣೆಕಟ್ಟೆ ಪ್ರಾರಂಭಗೊಂಡಾಗಿನಿಂದಲ್ಲೂ ಕೊಡಗಿನ ವಾತಾವರಣಕ್ಕನುಗುಣವಾಗಿ ಜುಲೈ ಮೊದಲ ವಾರದಲ್ಲಿ ನಾಲೆಗಳ ಮೂಲಕ ನೀರು ಹರಿಸುತ್ತಿದ್ದರು.