ಶನಿವಾರಸಂತೆ, ಆ. 2: ಸಮಾಜದಲ್ಲಿ ರೋಟರಿ ಸಂಸ್ಥೆಯ ಕೊಡುಗೆ ಮಹತ್ವದ್ದಾಗಿದೆ ಎಂದು ರೋಟರಿ ಕ್ಲಬ್‍ನ ಪ್ರಮುಖರಾದ ಸೂರ್ಯಪ್ರಕಾಶ್ ಭಟ್ ಅಭಿಪ್ರಾಯಟ್ಟರು. ಗುಡುಗಳಲೆಯ ಆರ್.ವಿ. ಕಲ್ಯಾಣ ಮಂಟಪದಲ್ಲಿ ಕ್ಲಬ್‍ನ 2017-18ನೇ ಸಾಲಿನ ಆಡಳಿತ ಮಂಡಳಿಯ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರೋಟರಿ ವಲಯ ಲೆಫ್ಟಿನೆಂಟ್ ಪಿ.ಎಸ್. ಮೋಹನ್ ರಾಮ್ ಹಾಗೂ ಕ್ಲಬ್ - 6ರ ಸಹಾಯಕ ಗವರ್ನರ್ ಮಹೇಶ್‍ಕುಮಾರ್ ನಲ್ವಾಡಿ ಮಾತನಾಡಿದರು. ನಿಕಟ ಪೂರ್ವ ಅಧ್ಯಕ್ಷ ಹೆಚ್.ವಿ. ದಿವಾಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೂತನ ಅಧ್ಯಕ್ಷ ಹೆಚ್.ಎಸ್. ವಸಂತಕುಮಾರ್, ಕಾರ್ಯದರ್ಶಿ ಎಸ್.ಎಸ್. ಸಾಗರ್, ನಿಕಟ ಪೂರ್ವ ಕಾರ್ಯದರ್ಶಿ ಡಿ. ಅರವಿಂದ್, ಸೋಮವಾರಪೇಟೆ ರೋಟರಿ ಅಧ್ಯಕ್ಷ ನಾಗೇಶ್, ಸಂಸ್ಥೆಯ ಹೆಚ್. ಟಿ. ಅನಿಲ್, ಡಾ. ಕೃಷ್ಣಾನಂದ, ಜಿ.ಪಂ. ಸದಸ್ಯ ದೀಪಕ್ ಹಾಗೂ ಇತರ ಸದಸ್ಯರುಗಳು ಉಪಸ್ಥಿತರಿದ್ದರು. ಈ ಸಂದರ್ಭ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.