ವೀರಾಜಪೇಟೆ, ಆ. 3: ವೀರಾಜಪೇಟೆಯಲ್ಲಿ ತಾ. 22ರಂದು ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಳ್ಳಲು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬಿಟ್ಟಂಗಾಲ ಗ್ರಾಮದ ಕೋಟೆಕಾಡ್ ಫಾರ್ಮ್ ಹೌಸ್‍ನಲ್ಲಿ ಪಕ್ಷದ ತಾಲೂಕು ಸಮಿತಿ ಅಧ್ಯಕ್ಷ ಮನೆಯಪಂಡ ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಸಂಘಟನೆಗಾಗಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಸಮಾವೇಶದಲ್ಲಿ ಪಕ್ಷದ ರಾಜ್ಯ ವರಿಷ್ಠರು, ಪ್ರಮುಖ ನಾಯಕರುಗಳು ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಪಕ್ಷದ ಕಾರ್ಯಕರ್ತರುಗಳಾದ ಮಾತಂಡ ರಮೇಶ್, ಕೋಲತಂಡ ಬೋಪಯ್ಯ, ಚೇಂದ್ರಿಮಾಡ ಗಣೇಶ್, ಮಾದಪಂಡ ಕಾಶಿ ಕಾವೇರಪ್ಪ, ಕೆ.ಪಿ.ನಾಗರಾಜ್, ಕೇಳಪಂಡ ವಿಶ್ವನಾಥ್, ಕೊಂಡಗೇರಿಯ ಯೂಸೂಫ್, ಪುಲಿಯಂಡ ಅಪ್ಪಯ್ಯ, ಕೊಳೇರ ದಯಾ, ಎಂ.ಟಿ.ಕಾರ್ಯಪ್ಪ, ಮೊಳ್ಳೇರ ಸುಭಾಷ್, ಬಾಚೀರ ಬಿದ್ದಪ್ಪ ಮತ್ತಿತರ ಕಾರ್ಯಕರ್ತರು ಹಾಜರಿದ್ದು ಚುನಾವಣೆ ಸಮೀಪಿಸುತ್ತಿರುವದರಿಂದ ಪಕ್ಷದ ಸಂಘಟನೆಗಾಗಿ ನಿರಂತರ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಸಭೆ ತೀರ್ಮಾನಿಸಿತು.