ಕುಶಾಲನಗರ, ಆ. 3: ಕುಶಾಲನಗರ ಹೋಬಳಿ ವೀರಶೈವ ಸಮಾಜ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ವೀರಶೈವ ಮುಖಂಡರು ಹಾಗೂ ಮಾಜಿ ಶಾಸಕ ದಿ. ಬಿ.ಬಿ. ಶಿವಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಬಿ.ಬಿ. ಶಿವಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವದರೊಂದಿಗೆ ಮೌನಾಚರಣೆ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಈ ಸಂದರ್ಭ ವೀರಶೈವ ಸಮಾಜದ ಗೌರವಾಧ್ಯಕ್ಷರಾದ ಹೆಚ್.ವಿ. ಶಿವಪ್ಪ, ಬಿ.ಬಿ. ಶಿವಪ್ಪ ಅವರ ಸಾಧನೆ ಹಾಗೂ ರಾಜಕೀಯವಾಗಿ ಬೆಳೆದುಬಂದ ಹಾದಿಯ ಬಗ್ಗೆ ಸ್ಮರಿಸಿದರು.

ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಿ. ಮಹದೇವಪ್ಪ, ವೀರಶೈವ ಸಮಾಜದ ಕಾರ್ಯಾಧ್ಯಕ್ಷ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಾದ ಹೆಚ್.ಎಂ. ಮಧುಸೂದನ್, ಗೌರವಾಧ್ಯಕ್ಷರಾದ ಬಿ.ಬಿ. ಲೋಕೇಶ್, ಎಂ.ಕೆ. ಚಂದ್ರಶೇಖರ್, ಮಾಜಿ ಅಧ್ಯಕ್ಷ ಹೆಚ್.ಎಸ್. ರೇವಪ್ಪ, ಕಾರ್ಯದರ್ಶಿ ವಿರೂಪಾಕ್ಷ, ಪ್ರಮುಖರಾದ ವಿ.ಸಿ. ಅಮೃತ್, ಮಂಜುನಾಥ್, ಪರಮೇಶ್, ಸದಣ್ಣ, ಪ್ರಶಾಂತ್ ಮತ್ತಿತರರು ಇದ್ದರು.