ಮಡಿಕೇರಿ, ಆ. 4 : ವ್ಯಕ್ತಿಯೋರ್ವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಉಡೋತ್‍ಮೊಟ್ಟೆಯಲ್ಲಿ ನಡೆದಿದೆ.ಉಡೋತ್‍ಮೊಟ್ಟೆ ನಿವಾಸಿ ಬಿ.ಎಸ್. ವೆಂಕಪ್ಪ ಪೂಜಾರಿ (43) ಎಂಬವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.ಗುರುವಾರ ಸಂಜೆ ಮನೆಯಿಂದ ನಾಪತ್ತೆಯಾಗಿದ್ದು, ಸಂಬಂಧಿಕರು ರಾತ್ರಿಯಿಡಿ ಹುಡಕಾಡಿದರೂ ಸಿಗದಿದ್ದಾಗ ಇಂದು ಬೆಳಿಗ್ಗೆ ಮತ್ತೆ ಹುಡುಕಾಡಿದಾಗ ಸಮೀಪದ ತೋಟವೊಂದರ ಕೆರೆಯಲ್ಲಿ ಬಿದ್ದು ಮೃತಪಟ್ಟಿರುವದು ಗೋಚರಿಸಿದೆ.

ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ರ ಪರೀಕ್ಷೆ ಬಳಿಕ ಸಂಜೆ ಅಂತ್ಯಕ್ರಿಯೆ ನಡೆಯಿತು. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.