ಮಡಿಕೇರಿ, ಆ. 5: ನೆಹರೂ ಯುವ ಕೇಂದ್ರದ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ 2017-18ನೇ ಸಾಲಿನ ಸ್ವಚ್ಛ ಭಾರತ ಕಾರ್ಯಕ್ರಮ ನೆಹರೂ ಯುವ ಕೇಂದ್ರದ ಬಿ.ಬಿ. ಮಹೇಶ್ ಹಾಗೂ ಇತರರ ಮಾರ್ಗದರ್ಶನದಲ್ಲಿ ನೆರವೇರಿತು. ಗಾಂಧೀಜಿಯವರ ಸ್ವಚ್ಛತೆಯ ಕನಸನ್ನು ಪ್ರಧಾನಮಂತ್ತಿ ನರೇಂದ್ರ ಮೋದಿಯವರು ಮತ್ತಷ್ಟು ಪರಿಣಾಮಗೊಳಿಸಿದ್ದು, ಇದನ್ನು ಯುವಕರು ಅನುಸರಿಸುವಂತೆ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ತಾ. 1 ರಿಂದ 15 ರವರೆಗೆ ದೇಶದಾದ್ಯಂತ ಸ್ವಚ್ಛ ಭಾರತ ಆಂದೋಲನ ಆಯೋಜಿಸಲಾಗಿದೆ.

ಆ ದಿಸೆಯಲ್ಲಿ ಕೊಡಗು ಜಿಲ್ಲೆಯಲ್ಲಿ ನೆಹರೂ ಯುವ ಕೇಂದ್ರದ ಕಾರ್ಯಕರ್ತರಾದ ಹೆಚ್.ವಿ. ರವೀಂದ್ರ, ಎಂ.ಬಿ. ವಿವೇಕ್, ಎಂ. ಪ್ರಿಯ, ಹೆಚ್.ಎಸ್. ದೀಪ ಮತ್ತು ಪಿ.ಜಿ. ಸುಮಿತ್ರ ಇವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಇದಕ್ಕೆ ಜಿಲ್ಲೆಯ ಎಲ್ಲಾ ಯುವಕ-ಯುವತಿ ಮಂಡಳಿಗಳು, ಯುವ ಒಕ್ಕೂಟಗಳು, ಶಾಲಾ-ಕಾಲೇಜುಗಳು ಮತ್ತು ಸಾರ್ವಜನಿಕರು ಪ್ರೋತ್ಸಾಹಿಸಿ ಸ್ವಚ್ಛ ಭಾರತ ಆಂದೋಲನ ಯಶಸ್ವಿಯಾಗಿ ನೆರವೇರಿಸಲು ಸಹಕರಿಸುವಂತೆ ಕೋರಿದ್ದಾರೆ.