ಸೋಮವಾರಪೇಟೆ, ಆ. 6 : ಮನೆಯ ಪಕ್ಕದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಕುರಿಯನ್ನು ನೆರೆಯ ಮನೆಯಾತ ಕಡಿದು ಸಾಂಬಾರ್ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕುರಿಯ ಮಾಲೀಕ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸಮೀಪದ ತೋಳೂರುಶೆಟ್ಟಳ್ಳಿ ಸುಭಾಷ್‍ನಗರದ ಮಲ್ಲ ಎಂಬವರು ತನಗೆ ಸೇರಿದ ಕುರಿಯನ್ನು ಮನೆಯ ಮುಂಭಾಗದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಈ ಸಂದರ್ಭ ಸಾಧಿಸಿದ ನೆರೆಮನೆಯ ರಾಜ ಎಂಬಾತ ಅದನ್ನು ಮನೆಗೆ ಕರೆತಂದು ಕಡಿದು ಮಾಂಸ ಮಾಡಿದ್ದಾನೆ.

ಸಂಜೆ ವೇಳೆಗೆ ಮೇಯಲು ಬಿಟ್ಟಿದ್ದ ಕುರಿ ನಾಪತ್ತೆಯಾದ್ದರಿಂದ ಹುಡುಕಾಟ ನಡೆಸಿದ ಮಲ್ಲ ಅವರಿಗೆ ನೆರೆಯ ಮನೆಯಾತನ ಮೇಲೆ ಸಂಶಯ ಬಂದಿದೆ. ಸ್ಥಳೀಯರನ್ನು ಕರೆದೊಯ್ದು ಮನೆಯೊಳಗೆ ತೆರಳಿದಾಗ ಅರ್ಧ ಮಾಂಸವನ್ನು ಸಾಂಬಾರ್ ಮಾಡಿದ್ದು, ಉಳಿದ ಮಾಂಸವನ್ನು ಪಾತ್ರೆಯಲ್ಲಿ ತುಂಬಿಸಿಟ್ಟಿರುವದು ಕಂಡುಬಂದಿದೆ.

ಸುಮಾರು 12 ಕೆ.ಜಿ. ತೂಕದ ಕುರಿಯನ್ನು ಕಡಿದು ಮಾಂಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ದಂತೆ ಕುರಿಯ ಮಾಲೀಕ ಮಲ್ಲ ಅವರು ಪೊಲೀಸ್ ದೂರು ನೀಡಿ ದ್ದಾರೆ. ಮಾಂಸದ ಆಸೆಯಿಂದ ಕದ್ದ ಕುರಿ ಜೀವ ಕಳೆದುಕೊಂಡಿದ್ದು, ಊಟದ ಆಸೆಯಲ್ಲಿದ್ದ ರಾಜ ಪೊಲೀಸರ ವಿಚಾರಣೆಗೆ ಒಳಗಾಗುವ ಸ್ಥಿತಿ ಎದುರಾಗಿದೆ.