ಮಡಿಕೇರಿ, ಆ. 8: ಮಡಿಕೇರಿ ಮಂಗಳೂರು ಹೆದ್ದಾರಿ ರಸ್ತೆ ಹಾನಿಯಾಗಿಲ್ಲ. ವಾಹನ ಸಂಚಾರ ಸುಗಮವಾಗಿ ನಡೆಯುತ್ತಿದೆ ಎಂದು ಕೆಎಸ್‍ಆರ್‍ಟಿಸಿ ಮಡಿಕೇರಿ ಬಸ್ ನಿಲ್ದಾಣದ ಸಂಚಾರ ನಿಯಂತ್ರಣಾ ಧಿಕಾರಿ ನಾರಾಯಣ ತಿಳಿಸಿದ್ದಾರೆ.ಮಡಿಕೇರಿ-ಮಂಗಳೂರು ರಸ್ತೆ ಕೊಯನಾಡು ಸಮೀಪ ದುರಸ್ತಿ ಗೊಂಡಿದೆ. ಸಂಚಾರ ಸ್ಥಗಿತ ಗೊಂಡಿದೆ ಎಂಬದಾಗಿ ಯಾರೋ ಕಿಡಿಗೇಡಿಗಳು ವಾಟ್ಸಾಪ್ ಮೂಲಕ ಸಂದೇಶ ರವಾನಿಸಿ ಸಮಾಜದಲ್ಲಿ ತಪ್ಪು ಸಂದೇಶ ಮೂಡಿಸಿದ್ದಾರೆ. ಇದರಿಂದಾಗಿ ಮಡಿಕೇರಿ ಬಸ್ ನಿಲ್ದಾಣಕ್ಕೆ ರಸ್ತೆ ಹಾನಿಯಾಗಿಲ್ಲ ಸಂಚಾರ ನಿಯಂತ್ರಕರ ಸ್ಪಷ್ಟನೆ ನೂರಾರು ದೂರವಾಣಿ ಕರೆಗಳು ಬರುತ್ತಿದ್ದು, ಸಮಸ್ಯೆ ಸೃಷ್ಟಿಯಾಗಿದೆ. ಕೊಯನಾಡು ಸಮೀಪ ಕಳೆದ 3 ವರ್ಷಗಳ ಹಿಂದೆ ರಸ್ತೆ ದುರಸ್ತಿಗೊಂಡಿತ್ತು. ಈ ಫೋಟೋವನ್ನು ವಾಟ್ಸಾಪ್‍ನಲ್ಲಿ ರವಾನಿಸಿ ಸಮಾಜದಲ್ಲಿ ಆತಂಕ ಮಾಡಿಸಿದ್ದಾರೆ. ಆದರೆ ಹೆದ್ದಾರಿಯಲ್ಲಿ ಯಾವದೇ ಸಮಸ್ಯೆಯಾಗಿಲ್ಲ ಎಂದು ತಿಳಿಸಿದ್ದಾರೆ.