ಸೋಮವಾರಪೇಟೆ, ಆ. 10: ಇತ್ತೀಚೆಗೆ ನಿಧನರಾದ ಬಿಜೆಪಿಯ ಹಿರಿಯ ಮುಖಂಡ, ಮಾಜೀ ರಾಜ್ಯಾಧ್ಯಕ್ಷ ಬಿ.ಬಿ. ಶಿವಪ್ಪ ಅವರ ಸ್ಮರಣೆ ಕಾರ್ಯಕ್ರಮ ಸೋಮವಾರಪೇಟೆಯಲ್ಲಿ ನಡೆಯಿತು.

ಹಿರಿಯ ಬಿಜೆಪಿ ಪದಾಧಿಕಾರಿಗಳು, ಶಿವಪ್ಪ ಅವರ ಒಡನಾಡಿಗಳು ಇಲ್ಲಿನ ಪುಟ್ಟಪ್ಪ ವೃತ್ತದಲ್ಲಿ ಸೇರಿ ಬಿ.ಬಿ. ಶಿವಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ನಂತರ ಗಣಪತಿ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಮಾಜೀ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬನ್ನಳ್ಳಿ ಗೋಪಾಲ್, ಹಿರಿಯರಾದ ಅನಂತ್‍ರಾಂ, ತಿಮ್ಮಶೆಟ್ಟಿ, ಡಿ.ಬಿ. ಧರ್ಮಪ್ಪ, ಬಿ.ಪಿ. ಶಿವಕುಮಾರ್, ಮೃತ್ಯುಂಜಯ, ಎಸ್.ಪಿ. ಪೊನ್ನಪ್ಪ, ಸೋಮಪ್ಪ, ವಿಶ್ವನಾಥ್, ರಾಘವ ಸೇರಿದಂತೆ ಇತರರು ಭಾಗವಹಿಸಿದ್ದರು.