ಸೋಮವಾರಪೇಟೆ, ಆ. 11: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಇಲ್ಲಿಗೆ ಸಮೀಪದ ಆಡಿನಾಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಯೋಜನಾಧಿಕಾರಿ ಪ್ರಕಾಶ್ ಮಾತನಾಡಿ, ನಮ್ಮ ನೆರೆ ಹೊರೆ, ಗ್ರಾಮದಲ್ಲಿ ಹಾಗೂ ನಮ್ಮ ಕಾರ್ಯಾಲಯದಲ್ಲಿ ಸ್ವಚ್ಛತೆಯನ್ನು ಮೊದಲು ಕಾಪಾಡಬೇಕು ಎಂಬ ದೃಢ ನಿರ್ಧಾರವನ್ನು ಕೈಗೊಳ್ಳಬೇಕು. ಪ್ರತಿ ವಾರದಲ್ಲಿ ಎರಡು ಗಂಟೆಯಂತೆ ವಾರ್ಷಿಕ ನೂರು ಗಂಟೆಯ ಅವಧಿಯನ್ನು ಶ್ರಮದಾನಕ್ಕೆ ಮೀಸಲಿಟ್ಟು, ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗು ತ್ತೇನೆಂಬ ಸಂಕಲ್ಪವನ್ನು ಎಲ್ಲರೂ ಮಾಡಬೇಕು ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿರೂಪಾಕ್ಷ, ಗ್ರಾಮದ ಪ್ರಮುಖರಾದ ಶಿವಣ್ಣ, ಅಂಗನವಾಡಿ ಕೇಂದ್ರ ಸಮಿತಿ ಅಧ್ಯಕ್ಷ ಶಶಿಕುಮಾರ್, ಶಿಕ್ಷಕಿ ತಾರಾ, ಸೇವಾ ಪ್ರತಿನಿಧಿ ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.