*ಸಿದ್ದಾಪುರ, ಆ. 12: ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಗತ್ತೂರು ಗ್ರಾಮದ ಕೃಷ್ಣಪುರ ನಿವಾಸಿಗಳಾದ ಎ.ವಿ. ಕಾರ್ಯಪ್ಪ, ಎ.ವಿ. ಬಸಪ್ಪ ಹಾಗೂ ಹನೀಫ್ ಎಂಬವರು ಗಳು ತಮ್ಮ ಭತ್ತದ ಗದ್ದೆಯನ್ನು ಹದಗೊಳಿಸಿ ಸಸಿ ಮಡಿಗಳನ್ನು ಹಾಕಿದ್ದರು. ಇನ್ನೇನು ಸಸಿಮಡಿ ತೆಗೆದು ನಾಟಿ ಮಾಡಬೇಕು ಎನ್ನುವಾಗ ರಾತ್ರಿವೇಳೆ ಕಾಡಾನೆಗಳ ಹಿಂಡು ಗದ್ದೆಯಲ್ಲಿದ್ದ ಸಸಿಮಡಿಗಳನ್ನು ತಿಂದು ತುಳಿದು ಸಂಪೂರ್ಣ ನಾಶಪಡಿಸಿದೆ. ಪಕ್ಕದ ಕಾಫಿ ತೋಟಕ್ಕೆ ತೆರಳಿ ಕಾಫಿ ಗಿಡಗಳನ್ನು ಕಿತ್ತುಹಾಕಿ ಬಾಳೆ, ತೆಂಗು, ಅಡಿಕೆ ಗಿಡಗಳನ್ನು ತಿಂದು ಹಾಕಿದೆ. ಬೆಳೆಗಾರರಿಗೆ ಸಹಸ್ರಾರು ರೂಪಾಯಿ ನಷ್ಟ ಸಂಭವಿಸಿದೆ.

ಅರಣ್ಯ ಇಲಾಖಾ ಅಧಿಕಾರಿಗಳಿಗೆ ನಷ್ಟಕ್ಕೊಳಗಾದ ರೈತರು ದೂರು ನೀಡಿದ್ದಾರೆ. ಅರಣ್ಯ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿದ್ದಾರೆ.