ಶ್ರೀಮಂಗಲ, ಆ. 13: ಶ್ರೀಮಂಗಲ ಬಸ್ ನಿಲ್ದಾಣದಲ್ಲಿ ಪ್ರತಿ ವರ್ಷ ನಡೆಯುವಂತೆ ತೃತೀಯ ವರ್ಷದ ಶ್ರೀ ಗೌರಿ - ಗಣೇಶ ಉತ್ಸವ ತಾ. 25ರಂದು ಬೆಳಿಗ್ಗೆ 9 ಗಂಟೆಗೆ ಪ್ರತಿಷ್ಠಾಪನೆ ಮಾಡಿ ಪ್ರತಿ ದಿನ ಪೂರ್ವಾಹ್ನ 9.30 ಗಂಟೆಗೆ ನಿತ್ಯ ಪೂಜೆ ಹಾಗೂ ಸಂಜೆ 6 ರಿಂದ 10 ಗಂಟೆಯವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಅನ್ನದಾನ ನಡೆಯಲಿದೆ.

ತಾ. 31 ರಂದು ಅಲಂಕೃತ ಭವ್ಯಮಂಟಪದೊಂದಿಗೆ ಪ್ರಾತಃಕಾಲ ಲಕ್ಷ್ಮಣ ತೀರ್ಥ ನದಿಯಲ್ಲಿ ವಿಸರ್ಜನೆ ಮಾಡಲಾಗುವದು ಎಂದು ಉತ್ಸವ ಸಮಿತಿ ತಿಳಿಸಿದೆ. ಈ ಸಂಬಂಧ ಇತ್ತೀಚೆಗೆ ಪೂರ್ವಭಾವಿ ಸಭೆ ನಡೆಸಲಾಯಿತು.