ಶನಿವಾರಸಂತೆ, ಆ. 13: ಶನಿವಾರಸಂತೆಯಲ್ಲಿ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಬಗ್ಗೆ ಶನಿವಾರಸಂತೆಯ ಗ್ರಾ.ಪಂ. ವತಿಯಿಂದ ಇಂದು ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ಎಂ.ಹೆಚ್. ಮಹಮದ್ ಗೌಸ್ ವಹಿಸಿದ್ದರು.

ಶನಿವಾರಸಂತೆ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಅಂದು ಧ್ವಜಾರೋಹಣ ನೆರವೇರಿಸಿ, ಶನಿವಾರಸಂತೆಯ ಸರಕಾರಿ ಪ್ರಾಥಮಿಕ ಶಾಲೆಗೆ ಬಂದು ಸೇರುವದು. ಶನಿವಾರಸಂತೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಎಲ್ಲಾ ಶಾಲೆಗಳು ಒಟ್ಟಾಗಿ ಸೇರಿ ಧ್ವಜಾರೋಹಣ ನೆರವೇರಿಸಲು ತೀರ್ಮಾನಿಸಲಾಯಿತು.

ಪೂರ್ವಭಾವಿ ಸಭೆಯಲ್ಲಿ ಶಾಲಾ ಶಿಕ್ಷಕರುಗಳು, ಪ್ರಾಂಶುಪಾಲರು, ಅಂಗನವಾಡಿ ಶಿಕ್ಷಕರು, ಸಾರ್ವಜನಿಕರು ಭಾಗವಹಿಸಿದ್ದರು.

ಗ್ರಾ.ಪಂ. ಆಡಳಿತ ಮಂಡಳಿಯ ಸದಸ್ಯರುಗಳಾದ ಸೌಭಾಗ್ಯಲಕ್ಷ್ಮಿ, ಉಷಾ, ರಜನಿ, ಹೇಮಾವತಿ, ಸರ್ದಾರ್ ಅಹಮದ್, ಆದಿತ್ಯಗೌಡ, ಕಾರ್ಯದರ್ಶಿ ತಮ್ಮಯಾಚಾರ್, ಬಿಲ್‍ಕಲೆಕ್ಟರ್ ವಸಂತ ಉಪಸ್ಥಿತರಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ವಂದಿಸಿದರು.