ಮಡಿಕೇರಿ, ಆ.14: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ತಾ. 15 ರಂದು (ಇಂದು) ಸಂಜೆ 6.30 ಗಂಟೆಗೆ ವಂದೇಮಾತರಂ ಸಂಗೀತ ಕಾರ್ಯಕ್ರಮವನ್ನು ನಗರದಲ್ಲಿ ಆಯೋಜಿಸಲಾಗಿದೆ.ನಗರದ ಕಾವೇರಿ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಗಾಯಕ ರವಿಮುರೂರು ಮತ್ತು ತಂಡದಿಂದ ಸಂಗೀತ ಪ್ರಸ್ತುತಿ ಇರುತ್ತದೆ. ಖ್ಯಾತ ಜಾದೂಗಾರ ವಿಕ್ರಂ ಜಾದೂಗಾರ್ ಅವರಿಂದ ರಾಷ್ಟಧ್ವಜದ ಮ್ಯಾಜಿಕ್ ಪ್ರದರ್ಶನ ಕೂಡ ಜರುಗಲಿದೆ. ಅಂತೆಯೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಸಕ್ತ ಪ್ರೇಕ್ಷಕರಿಗೆ ದೇಶಭಕ್ತಿ ಜಾಗೃತಿ ಮೂಡಿಸುವ ಸಂದೇಶ (ಪಂಚಿಂಗ್ ಸ್ಲೋಗನ್) ರಚಿಸುವ ಸ್ಪರ್ಧೆ ಕೂಡ ಆಯೋಜಿತ ವಾಗಿದ್ದು, ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಮತ್ತು ಗೌರವ ಕಾರ್ಯದರ್ಶಿ ಪಿ.ಎಂ.ಸಂದೀಪ್ ತಿಳಿಸಿದ್ದಾರೆ.

ವಂದೇಮಾತರಂ ಸಂಗೀತ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ, ಮುಳಿಯ ಜ್ಯುವೆಲ್ಲರ್ಸ್, ‘ಶಕ್ತಿ’ ಪ್ರತಿಷ್ಠಾನ, ಫರ್ನೀಚರ್ ಲಾಂಜ್, ಅರುಣ ಸ್ಟೋರ್ಸ್ ಹಾಗೂ ಟಿವಿ 1 ಕೊಡಗು ಸಹಪ್ರಾಯೋಜಕತ್ವ ನೀಡಿದೆ.