*ಗೋಣಿಕೊಪ್ಪಲು, ಆ. 14: ನಾಗರಹೊಳೆ ಅರಣ್ಯ ವ್ಯಾಪ್ತಿಯ ಜಂಗಲ್ ಹಾಡಿಯಲ್ಲಿ ಸುಮಾರು 1 ಲಕ್ಷದ 80 ಸಾವಿರ ರೂಪಾಯಿ ಬೆಲೆ ಬಾಳುವ ಶ್ರೀಗಂಧದ ಮರವನ್ನು ಕಳ್ಳಸಾಗಣಿಕೆ ಮಾಡುತ್ತಿದ್ದ ತೊಡಗಿದ್ದ ಮೂವರು ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಒರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಜಂಗಲ್ ಹಾಡಿ ಕಾಲೋನಿಯಲ್ಲಿ 30 ಕೆ.ಜಿ. ಶ್ರೀಗಂಧ ಮರವನ್ನು ತುಂಡರಿಸಿ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಗಳು ಆರೋಪಿ ಗಳಾದ ಜೆ.ಟಿ. ಸೀನ, ಬಸವರಾಜು, ರಾಜು ಎಂಬವರನ್ನು ಬಂಧಿಸಿದ್ದು, ಭೀಮರಾಜು ಎಂಬಾತ ತಲೆ ಮರೆಸಿ ಕೊಂಡಿದ್ದಾನೆ ಎಂದು ಮತ್ತಿಗೋಡು ವಲಯ ಅರಣ್ಯಾಧಿಕಾರಿ ಕಿರಣ್ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ಯಲ್ಲಿ ಡಿ.ಆರ್.ಎಫ್.ಓ ಸತೀಶ್, ನಾರಾಯಣ, ಅರಣ್ಯ ವೀಕ್ಷಕ ಶರತ್, ಅರಣ್ಯ ರಕ್ಷಕ ಬಸವರಾಜು ಹಾಜರಿದ್ದರು. -ಎನ್.ಎನ್. ದಿನೇಶ್