ಮಡಿಕೇರಿ, ಆ. 17: ಗ್ರಾಮೀಣ ಅಂಚೆ ನೌಕರರ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಜಿಲ್ಲಾ ಅಂಚೆ ಅಧೀಕ್ಷಕರ ಕಚೇರಿ ಎದುರು ಜಿಲ್ಲೆಯ ಗ್ರಾಮೀಣ ಅಂಚೆ ನೌಕರರು ಪ್ರತಿಭಟನೆ ನಡೆಸಿದರು. ನಿನ್ನೆಯಿಂದ ದೇಶದೆಲ್ಲೆಡೆ ಎಐಜಿಡಿಎಸ್‍ಯು ಸಂಘಟನೆಯಡಿ ಪ್ರತಿಭಟನೆ ನಡೆಸುತ್ತಿರುವ ನೌಕರರು ಬೇಡಿಕೆ ಈಡೇರಿಸುವ ತನಕ ಅನಿರ್ಧಿಷ್ಟಕಾಲ ಹೋರಾಟ ನಡೆಸುವ ದಾಗಿ ಸಂಘಟನೆಯ ವಲಯ ಕಾರ್ಯ ದರ್ಶಿ ಕೆ.ಎಸ್. ರುದ್ರೇಶ್ ತಿಳಿಸಿದ್ದಾರೆ.