ಮಡಿಕೇರಿ, ಆ. 16: ಮಡಿಕೇರಿಯ ಕೋಟೆ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ಸಮಾಜದ ಹಾಗೂ ಮಾತೃಭೂಮಿ ತಂಡದಿಂದ ಸ್ನೇಹಮಿಲನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಸಮಾಜದ ಅಧ್ಯಕ್ಷೆ ಪ್ರೇಮಾ ಸೋಮಯ್ಯ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉದ್ಘಾಟಿಸಿದರು.

ತಂಡದ ಸದಸ್ಯೆ ಭಾರತಿ ರಮೇಶ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳಾಡಿದರು. ವಿಜಯಲಕ್ಷ್ಮಿ ಸ್ವಾತಂತ್ರ್ಯದ ಬಗ್ಗೆ ಹಾಗೂ ಧ್ವಜದ ಬಗ್ಗೆ ಸಭೆಗೆ ಮಾಹಿತಿ ಇತ್ತರು. ಶಶಿಕಲಾ ಲೋಕೇಶ್ ಮನೆ ಮದ್ದಿನ ಬಗ್ಗೆ ವಿವರಣೆ ನೀಡಿದರು. ಸದಸ್ಯೆಯರಿಗೆ ಆಟೋಟಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾ ಯಿತು. ಪ್ರೇಮಾ ರಾಘವಯ್ಯ ಪ್ರಾರ್ಥಿಸಿ, ಧರ್ಮಾವತಿ ವಸಂತ್ ವಂದಿಸಿದರೆ, ನಂದಿನಿ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.

ರಾಷ್ಟ್ರಗೀತೆ ಮತ್ತು ಶಾಂತಿ ಮಂತ್ರದ ನಂತರ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಕಾರ್ಯಕ್ರಮದಲ್ಲಿ ಅರವಿಂದ ಅಣ್ಣಪ್ಪ, ಕುಸುಮಾ ಪ್ರಸಾದ್, ಬೇಬಿ ಪೂವಯ್ಯ, ಸೀತಾ ಉತ್ತಪ್ಪ, ರಾಣಿ ಮಾಚಯ್ಯ, ಸವಿತಾ ಸಂತೋಷ್, ಜಯಶ್ರೀ ಗವಿ, ಪ್ರಪುಲ್ಲಾ, ಲಕ್ಷ್ಮಿಮೋಹನ್, ಪೂರ್ಣಿಮಾ ಜಗದೀಶ್, ಸಮಾಜದ ಸದಸ್ಯೆಯರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.