ಸಿದ್ದಾಪುರ, ಆ. 17: ಇತ್ತೀಚೆಗೆ ಮಾಲ್ದಾರೆ ಸಮೀಪದ ಮೈಲಾದಪುರದ ಕಾಫಿ ತೋಟವೊಂದರಲ್ಲಿ ಜಾನುವಾರುಗಳ ಮೇಲೆ ಹುಲಿಯೊಂದು ಧಾಳಿ ನಡೆಸಿ ಜಾನುವಾರುಗಳು ಸಾವನ್ನಪ್ಪಿದವು. ಈ ಹಿನ್ನೆಲೆಯಲ್ಲಿ ಹುಲಿಯ ಚಲನವಲನಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ವತಿಯಿಂದ ಕಾಫಿ ತೋಟದಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಇದೀಗ ಸಿ.ಸಿ. ಕ್ಯಾಮರಾಗಳಲ್ಲಿ ಹುಲಿಯ ದೃಶ್ಯ ಸೆರೆಯಾಗಿದ್ದು, ಹುಲಿ ಇರುವದು ದೃಢಪಟ್ಟಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವದಾಗಿ ವಲಯ ಅರಣ್ಯಾಧಿಕಾರಿ ಅಶೋಕ್ ತಿಳಿಸಿದ್ದಾರೆ.

-ವಾಸು