ಮಡಿಕೇರಿ, ಆ. 17: ಮಡಿಕೇರಿ, ಆ. 17: ಮಡಿಕೇರಿ ನಗರಸಭೆ ವತಿಯಿಂದ ಫಾರಂ-3 ವಿತರಣೆಗೆ ಸಂಬಂಧಿಸಿದಂತೆ ಕಡತಗಳು ನಾಪತ್ತೆಯಾಗುತ್ತಿದ್ದು, ನಾಗರಿಕರಿಗೆ ವಿನಾಕಾರಣ ತೊಂದರೆ ನೀಡ ಲಾಗುತ್ತಿದೆ ಎಂದು ಪಕ್ಷಾತೀತವಾಗಿ ನಗರಸಭೆ ಸದಸ್ಯರುಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಸೇರಿದಂತೆ ಬಿಜೆಪಿ, ಕಾಂಗ್ರೆಸ್, ಎಸ್‍ಡಿಪಿಐ, ಜೆಡಿಎಸ್ ಪಕ್ಷಗಳ ಬಹುತೇಕ ಸದಸ್ಯರುಗಳು ಫಾರಂ-3 ವಿತರಣೆ ಸಂಬಂಧ ನಗರಸಭೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದರು.