ಮಡಿಕೇರಿ, ಆ. 19: ಕೊಡಗು ಜಿಲ್ಲಾ ಕಾಂಗ್ರೆಸ್ನ ರೇಸ್ ಕೋರ್ಸ್ ರಸ್ತೆಯಲ್ಲಿ ತೆರೆಯಲಾಗಿರುವ ನೂತನ ಕಚೇರಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಎಲ್ಲರ ಸಲಹೆ, ಸೂಚನೆ ಪಡೆದುಕೊಂಡು ಪಕ್ಷ ಸಂಘಟನೆ ಮಾಡಲಾಗುವದು. ಹಿರಿಯರನ್ನು ಬದಿಗೊತ್ತಿ ನಡೆಯುತ್ತಿದ್ದಾರೆ ಎಂಬ ಮಾತಿದೆ. ಆದರೆ ಎಲ್ಲ ಹಿರಿಯರನ್ನು ಒಗ್ಗೂಡಿಸಿ ಅವರ ಮಾರ್ಗ ದರ್ಶನದೊಂದಿಗೆ ಮುನ್ನಡೆಯಲಾ ಗುವದು. ಹಿಂದೆ ಜಿಲ್ಲೆಯಲ್ಲಿ ಕಾಂಗ್ರೆಸ್ನ ಮೂವರು ಸಚಿವರಿದ್ದರು. ಆ ದಿನಗಳು ಮರುಕಳಿಸು ವಂತಾಗಬೇಕು. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಪಕ್ಷಕ್ಕೆ ಅಂಟಿಕೊಂಡಿರುವ ಧೂಳನ್ನು ಶುಚಿಗೊಳಿಸಿ, ವ್ಯವಸ್ಥಿತವಾಗಿ ಪಕ್ಷ ಸಂಘಟನೆಯಾಗಬೇಕೆಂದು ಹೇಳಿದರು.
ಅರಣ್ಯ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಪಿ.ಕೆ. ಪೊನ್ನಪ್ಪ, ಕಾವೇರಮ್ಮ ಸೋಮಣ್ಣ, ಕೆ.ಎಂ. ಲೋಕೇಶ್, ನಾಪಂಡ ಮುತ್ತಪ್ಪ, ನಟೇಶ್ಗೌಡ ಅವರುಗಳು ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಎಲ್ಲರೂ ಪಣತೊಡಬೇಕೆಂದು ಕರೆ ನೀಡಿದರು.
ವಿ.ಪಿ. ಸುರೇಶ್, ಜಿ.ಆರ್. ಪುಷ್ಪಲತಾ, ಅಬ್ದುಲ್ ರಜಾಕ್, ಚುಮ್ಮಿ ದೇವಯ್ಯ ಇನ್ನಿತರರು ವೇದಿಕೆಯಲ್ಲಿದ್ದರು.