ಕುಶಾಲನಗರ, ಆ. 20: ಶನಿವಾರ ತಡರಾತ್ರಿ ಕುಶಾಲನಗರ ದಿಂದ ಕೊಪ್ಪ ಕಡೆಗೆ ಬರುತ್ತಿದ್ದ ಬೈಕ್, ಕುಶಾಲನಗರ ಕಡೆಗೆ ಧಾವಿಸುತ್ತಿದ್ದ ಕಾರ್‍ಗೆ ಕೊಪ್ಪ ಸೇತುವೆ ಬಳಿ ಡಿಕ್ಕಿಯಾಗಿದ್ದು, ಬೈಕ್‍ನಲ್ಲಿದ್ದ ಮುಳ್ಳುಸೋಗೆಯ ನಿವಾಸಿಗಳಾದ ಜಬೀವುಲ್ಲಾ ಖಾನ್, ಇರ್ಷಾದ್, ಬಾದ್‍ಷಾ ಎಂಬವರುಗಳಿಗೆ ತೀವ್ರ ಏಟಾಗಿದೆ ಇಬ್ಬರು ಯುವಕರಿಗೆ ಕೈಕಾಲು ಮುರಿತ ಉಂಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸಲಾಗಿದೆ ಎಂದು ಬೈಲುಕೊಪ್ಪ ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೈಲುಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.