ಮಡಿಕೇರಿ, ಆ. 24: ಮಡಿಕೇರಿಯ ಅಬ್ದುಲ್ ರೆಹÀಮಾನ್ ಹಾಗೂ ಈತನೊಂದಿಗೆ 12 ಮಂದಿಯ ತಂಡವೊಂದು, ಅನೇಕರಿಗೆ ವಿವಾಹದ ಆಮಿಷವೊಡ್ಡಿ ಹಣ ಮತ್ತು ಆಭರಣ ದೋಚಿ ವಂಚಿಸಿರುವ ಪ್ರಕರಣದ ತನಿಖೆಯನ್ನು ಕೇರಳ ಪಾಲಕ್ಕಾಡ್ ಪೊಲೀಸರು ಮುಂದುವರಿಸಿದ್ದಾರೆ.ಪೊಲೀಸ್ ಕಸ್ಟಡಿಯಲ್ಲಿರುವ ಪ್ರಮುಖ ಆರೋಪಿ ಅಬ್ದುಲ್ ರೆಹಮಾನ್ ನೀಡಿದ ಸುಳಿವಿನ ಮೇರೆಗೆ, ಇಂದು ಕೇರಳದ ಪಾಲಕ್ಕಾಡ್‍ನ ನಟ್ಟುಕಲ್ ಠಾಣೆ ಪೊಲೀಸರು ಮಹಿಳೆಯೋರ್ವಳ ಬಂಧನಕ್ಕಾಗಿ ಶನಿವಾರಸಂತೆಗೆ ಬಂದಿದ್ದಾರೆ.ಈ ವೇಳೆ ಆರೋಪಿ ಮಹಿಳೆ ಕೇವಲ ಎರಡು ತಿಂಗಳ ಮಗುವಿನ ತಾಯಿಯಾಗಿರುವ ಕಾರಣ, ಮಾನವೀಯ ನೆಲೆಯಲ್ಲಿ ಹಿಂತೆರಳಿದ್ದಾರೆಂದು ಗೊತ್ತಾಗಿದೆ. ಅಲ್ಲದೆ ಆರೋಪಿಗಳು ಇನ್ನು ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಂಬಂಧ ತನಿಖೆಯನ್ನು ಮುಂದುವರಿಸಿರುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ.