ಸಿದ್ದಾಪುರ, ಆ. 26: ಗೋವಿನ ಹೆಸರಿನಲ್ಲಿ ಭಾರತದಲ್ಲಿ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ ಎಂಬ ಘೋಷಣೆ ಯೊಂದಿಗೆ ಎಸ್‍ಡಿಪಿಐ ನಡೆಸುತ್ತಿರುವ ರಾಷ್ಟ್ರೀಯ ಅಭಿಯಾನದ ಸಮಾರೋಪದ ಅಂಗವಾಗಿ ಮನೆಯಿಂದ ಹೊರಗೆ ಬನ್ನಿ ಎಂಬ ಹೆಸರಿನಲ್ಲಿ ಸಿದ್ದಾಪುರದಲ್ಲಿ ಎಸ್‍ಡಿಪಿಐ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.

ಮಾನವ ಸರಪಳಿಯಲ್ಲಿ ಎಸ್‍ಡಿಪಿಐ ಜಿಲ್ಲಾ ಕೋಶಾಧಿಕಾರಿ ಇಬ್ರಾಹಿಂ, ಗೋಣಿಕೊಪ್ಪ, ಸಿದ್ದಾಪುರ ಘಟಕದ ಅಧ್ಯಕ್ಷ ಶಾಹುಲ್, ಗ್ರಾ.ಪಂ ಸದಸ್ಯರಾದ ಹುಸೈನ್, ಶೌಕತ್ ಅಲಿ, ಸಂಶೀರ್ ಪ್ರಮುಖರಾದ ಬಶೀರ್, ಅಫ್ಸಲ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಇದ್ದರು.