ಗುಡ್ಡೆಹೊಸೂರು, ಆ. 26: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಶ್ರೀ ಜೋಡಿ ಬಸವೇಶ್ವರ ದೇವಸ್ಥಾನಕ್ಕೆ ಒಳನುಗ್ಗಿದ ಕಳ್ಳರು ದೇವಸ್ಥಾನದ 3 ಹುಂಡಿಗಳನ್ನು ಬೀಗಮುರಿದು ಅಂದಾಜು 2000 ರೂ ಹಣವನ್ನು ಕಳ್ಳತನ ಮಾಡಲಾಗಿದೆ. ಇತ್ತೀಚೆಗೆ ಹುಂಡಿಯ ಹಣವನ್ನು ಆಡಳಿತ ಮಂಡಳಿಯಿಂದ ತೆಗೆಯಲಾಗಿತ್ತು. ಅದೇ ದೇವಸ್ಥಾನದಲ್ಲಿ ಕಳೆದ ವರ್ಷ ಸುಮಾರು 20ಸಾವಿರ ಹಣವನ್ನು ಕಳ್ಳತನ ಮಾಡಲಾಗಿತ್ತು. ಕಾರ್ಯದರ್ಶಿ ಧನಂಜಯ ಮತ್ತು ಸದಸ್ಯ ಈರಪ್ಪ ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಅದೇ ರೀತಿ ಗುಡ್ಡೆಹೊಸೂರು ಬೊಳ್ಳೂರು ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಹುಂಡಿಯನ್ನು ಪ್ರತಿ ತಿಂಗಳು ಕದಿಯುತ್ತಿರುವದಾಗಿ ಅಲ್ಲಿನ ಆಡಳಿತ ಮಂಡಳಿಯವರು ಪತ್ರಿಕೆಯೊಂದಿಗೆ ದೂರಿದ್ದಾರೆ.