ಮಡಿಕೇರಿ ಆ. 26: ಮಡಿಕೇರಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಕರ್ಣಂಗೇರಿ ಗ್ರಾಮದಲ್ಲಿರುವ ಕೊಡಗು ವೈದ್ಯಕೀಯ ಕಾಲೇಜು ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಸಂಘದ ಅಧ್ಯಕ್ಷ ಕೆ.ಎ. ಆನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಫಲದ ಸುಮಾರು 200 ಸಸಿಗಳನ್ನು ನೆಡಲಾಯಿತು.

ಉಪಾಧ್ಯಕ್ಷ ಟಿ.ವಿ. ಗಣಪತಿ, ಕಾರ್ಯದರ್ಶಿ ಎಂ.ಪಿ. ಕಾವೇರಪ್ಪ, ನಿರ್ದೇಶಕರುಗಳಾದ ಎಂ.ಪಿ. ಚಂದ್ರು, ಎಂ.ಕೆ. ನಾಚಪ್ಪ, ಟಿ.ಕೆ. ಅಪ್ಪಚ್ಚು, ಕೆ.ವಿ. ಮುತ್ತಣ್ಣ, ಪಿ.ಕೆ. ಕುಟ್ಟಪ್ಪ, ಎಂ. ಗಣೇಶ್, ಕೆ.ಪಿ. ಮ್ಯಾಥ್ಯು ಹಾಗೂ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಡಿ.ಕೆ. ಮಹೇಂದ್ರ, ಕಚೇರಿ ಸಿಬ್ಬಂದಿ ಚಂಗಪ್ಪ ಮತ್ತಿತರರು ಹಾಜರಿದ್ದರು.