*ಸಿದ್ದಾಪುರ, ಆ. 30: ಇಲ್ಲಿಗೆ ಸಮೀಪದ ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ನೆಲ್ಲಿಹಡ್ಲು ಗ್ರಾಮದಲ್ಲಿ ಕಾಡಾನೆಗಳು ಗದ್ದೆಗಳಿಗೆ ನುಗ್ಗಿ ಧಾಳಿ ಮಾಡಿದ್ದು, ನಾಟಿ ಮಾಡಿದ್ದ ಪೈರುಗಳು ನಾಶವಾಗಿವೆ. ಅಲ್ಲಿನ ಕೃಷಿಕ ನೂಜಿಬೈಲು ನಾಣಯ್ಯ ಅವರ ಗದ್ದೆಗೆ ಮೂರು ಕಾಡಾನೆಗಳು ಧಾಳಿ ಮಾಡಿ ನಾಶಪಡಿಸಿವೆ. ಮಳೆ ಕೊರತೆ ನಡುವೆ ಕಷ್ಟದಲ್ಲಿ ಗದ್ದೆ ಮಾಡಿದ್ದು, ಇದೀಗ ಆನೆ ಧಾಳಿಯಿಂದಾಗಿ ಅದೂ ಕೂಡ ನಾಶವಾಗಿದೆ. ಸ್ಥಳಕ್ಕೆ ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ನಷ್ಟಕ್ಕೊಳಗಾಗಿರುವ ಕೃಷಿಕರಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.