ಕೂಡಿಗೆ, ಆ. 30: ಹುದುಗೂರು ಕಾಳಿಕಾಂಬ ಯೂತ್ ಕ್ಲಬ್ ತಂಡ ಬೆಂಗಳೂರಿನಲ್ಲಿ ಅರೆಭಾಷೆ ಗೌಡ ಕಪ್ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿತು. ಬೆಂಗಳೂರಿನ ಜಾಲಹಳ್ಳಿಯ ಹೆಚ್.ಇ.ಎಲ್. ಮೈದಾನದಲ್ಲಿ ಅರೆಭಾಷೆ ಗೌಡ ಸಮಾಜದ ವತಿಯಿಂದ ವಿವಿಧ ಕ್ರೀಡಾ ಕೂಟಗಳನ್ನು ಆಯೋಜಿಸಲಾಗಿತ್ತು.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹುದುಗೂರು ಗ್ರಾಮದ ಕಾಳಿಕಾಂಬ ಯೂತ್ ಫ್ರೆಂಡ್ಸ್ ತಂಡ ಮಡಿಕೇರಿಯ ಗೌಡ ಯುವ ವೇದಿಕೆಯ ತಂಡಗಳು ಅಂತಿಮ ಪಂದ್ಯಾಟದಲ್ಲಿ ಸೆಣಸಾಟ ನಡೆಸಿ ಹುದುಗೂರು ತಂಡ ಗೆಲುವು ತನ್ನದಾಗಿಸಿಕೊಂಡರೆ, ಮಡಿಕೇರಿ ಯುವ ವೇದಿಕೆ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು.

ತಂಡದಲ್ಲಿ ಕಡ್ಯಾದ ಚೇತನ್, ಕಡ್ಯಾದ ಕಾರ್ತಿಕ್, ಸುನೀಲ್, ಬೆಳ್ಳಿಮಾನೆ ಗೋಪಿತ್, ತಕ್ಕಡ ವಿಕ್ಯಾತ್, ಸಂಪಿಗೆಯ ಶ್ಯಾಮ್, ಮುಕ್ಕಾಟಿ ನಿದಿ ಹಾಗೂ ಯಶ್ವಿನ್ ಭಾಗವಹಿಸಿದ್ದರು.