ವೀರಾಜಪೇಟೆ, ಆ. 31: ಇಲ್ಲಿನ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ರಾತ್ರಿ 8.30 ಗಂಟೆಗೆ ಸ್ಥಳೀಯ ಮಕ್ಕಳಿಂದ ಸಾಂಸ್ಕøತಿಕ ಮನರಂಜನೆ ಕಾರ್ಯಕ್ರಮ.

ಜೈನರಬೀದಿಯ ಬಸವನ ಗುಡಿಯ ಗೌರಿ ಗಣೇಶೋತ್ಸವ ಸಮಿತಿಯಿಂದ ರಾತ್ರಿ 9.30ಗಂಟೆಗೆ ‘ಸ್ವರಾರ್ಣವ ಸಂಗೀತ’ ಶಾಲೆಯ ಬಿ.ಎಸ್. ದಿಲೀಪ್ ಕುಮಾರ್ ಶಿಷ್ಯ ವೃಂದದವರಿಂದ ಸಂಗೀತ ಕಾರ್ಯಕ್ರಮ.

ಅಪ್ಪಯ್ಯ ಸ್ವಾಮಿ ರಸ್ತೆಯ ಬಾಲ ಆಂಜನೇಯ ಗಣಪತಿ ಸೇವಾ ಸಮಿತಿಯಿಂದ ರಾತ್ರಿ 8.30 ಗಂಟೆಗೆ ‘ಕೊಡವ ನಾಟಕ’ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನಾಪೆÇೀಕ್ಲು

ತಾ. 1ರÀಂದು (ಇಂದು) ನಾಪೆÇೀಕ್ಲು ಪಟ್ಟಣದಲ್ಲಿ ಐದು ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ.

ಪಟ್ಟಣದಲ್ಲಿ ಸುಗಮ ಸಂಚಾರ ಏರ್ಪಡಿಸುವ ನಿಟ್ಟಿನಲ್ಲಿ ಮಧ್ಯಾಹ್ನ 12 ಗಂಟೆಯಿಂದ ಹಳೇತಾಲೂಕು ರಸ್ತೆಯ ಪೆಟ್ರೋಲ್ ಬಂಕ್ ನಿಂದ ಮಾರುಕಟ್ಟೆಯವರೆಗೆ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಾಹನಗಳನ್ನು ಕೊಡವ ಸಮಾಜ ರಸ್ತೆ, ಬೇತು ರಸ್ತೆ, ಪೆÇಲೀಸ್ ಮೈದಾನದಲ್ಲಿ ನಿಲುಗಡೆಗೊಳಿಸಿ ವಾಹನ ಚಾಲಕರು, ಮಾಲಿಕರು, ಸಾರ್ವಜನಿಕರು ಸಹಕರಿಸಬೇಕೆಂದು ನಾಪೆÇೀಕ್ಲು ಠಾಣಾಧಿಕಾರಿ ನಂಜುಂಡ ಸ್ವಾಮಿ ಕೋರಿದ್ದಾರೆ. ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವದು ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.