ಗೋಣಿಕೊಪ್ಪಲು, ಆ. 31: ಇಲ್ಲಿನ ಕಾಲ್ಸ್ ಶಾಲೆಯ ಕ್ರೀಡಾಪಟು ಬಡುವಮಂಡ ತ್ರಿಶಾಲಿ ದೇವಯ್ಯ 9 ನೇ ದಕ್ಷಿಣ ವಲಯ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ತಮಿಳುನಾಡಿನ ಪೊಲೀಸ್ ಶೂಟಿಂಗ್ ರೇಂಜ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ ತ್ರಿಶಾಲಿ ದೇವಯ್ಯ ಓಪನ್ ಸೈಟ್ ಹಾಗೂ ಪೀಪ್ ಸೈಟ್ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡರು. ಟೂರ್ನಿಯಲ್ಲಿ ಕಾಲ್ಸ್ ಶಾಲೆಯ 7 ಸ್ಪರ್ಧಿಗಳು ಭಾಗವಹಿಸಿದ್ದರು.

ಜಸ್ಟಿನ್ ಜೋನ್ಸ್ 2 ಚಿನ್ನದ ಪದಕ ಪಡೆದರು. ಸೋನಿಕಾ ಮಹೇಶ್ 6 ನೇ ಸ್ಥಾನ, ತರಾನ ರಮೇಶ್ 8 ನೇ ಸ್ಥಾನ, ಹೆಚ್.ಎಂ ಐಶ್ವರ್ಯ 14 ನೇ ಸ್ಥಾನ ಪಡೆದುಕೊಂಡರು. ತರಬೇತು ದಾರರಾಗಿ ಪುನೀತ್ ಹಾಗೂ ಕೆ. ಕೆ. ಜೀವನ್ ಕಾರ್ಯನಿರ್ವಹಿಸಿದರು.