ಗೋಣಿಕೊಪ್ಪಲು, ಸೆ. 1: ತಾಂತ್ರಿಕ ಕಾಲೇಜಿನಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನು ತುರ್ತಾಗಿ ನಡೆಸಲು ಅವಕಾಶ ನೀಡಲು ಪರೀಕ್ಷಾ ಪದ್ದತಿ ಬದಲಾಯಿಸಬೇಕು ಎಂದು ಒತ್ತಾಯಿಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿರುದ್ದ ಹಳ್ಳಿಗಟ್ಟು ಸಿಐಟಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಬೆಳಿಗ್ಗೆ ಕಾಲೇಜಿನ ಆವರಣದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಇತ್ತೀಚೆಗಷ್ಟೆ ಫಲಿತಾಂಶÀ ಹೊರ ಬಂದಿದೆ. ಆದರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನು ಸಾಮಾನ್ಯವಾಗಿ ನಡೆಯುವ ಸೆಮಿಸ್ಟರ್ ಪರೀಕ್ಷೆ ಅವಧಿಯಲ್ಲಿ ಮಾತ್ರ ನಡೆಸುತ್ತಿದ್ದಾರೆ. ಇದರಿಂದ ಸುಮಾರು 6 ತಿಂಗಳಷ್ಟು ಕಾಲ ವಿದ್ಯಾರ್ಥಿಗೆ ಸಮಯ ವ್ಯರ್ಥವಾಗುತ್ತಿದೆ. ವಿವಿ ಮರು ಪರೀಕ್ಷೆ ಅವಧಿಯನ್ನು ಬೇರೆ ವಿವಿಗಳಲ್ಲಿ ನಡೆಸುವ ಮಾದರಿ ತುರ್ತಾಗಿ ನಡೆಸುವ ಮೂಲಕ ಸಮಯ ವ್ಯರ್ಥಗೊಳ್ಳದಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.