ಮಡಿಕೇರಿ, ಸೆ. 2: ಬಾಳೆಲೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಬಾಳೆಲೆ ಕ್ಲಸ್ಟರ್ ಸಮೂಹದ ಸಂಪನ್ಮೂಲ ವ್ಯಕ್ತಿ ಚಿಕ್ಕದೇವ್, ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವ ಹಿಂದಿನ ಸಿಆರ್‍ಪಿಗಳಾದ ಕೆ.ಪಿ.ಕುಶಾಲಪ್ಪ, ಪ್ರತಿಭಾ ಕಾರಂಜಿ ಪ್ರಶಸ್ತಿ ಪತ್ರ ಪ್ರವರ್ತಕ ಹಾಗೂ ವಿಭಾಗಮಟ್ಟದ ಕ್ರೀಡಾಕೂಟ ಯಶಸ್ವಿಗೆ ಕಾರಣರಾದ ಅಳಮೇಂಗಡ ಬೋಸ್ ಮಂದಣ್ಣ ಹಾಗೂ ದೈಹಿಕ ಶಿಕ್ಷಕ ಪಿ.ಎ. ಪ್ರಭು ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬಾಳೆಲೆ ಸ.ಮಾ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಎ.ಎಂ. ಪ್ರೇಮಾವತಿ ವಹಿಸಿದ್ದರು. ಸಿ.ಆರ್.ಪಿ. ಚಿಕ್ಕದೇವ್ ಸ್ವಾಗತಿಸಿ, ಸಹ ಶಿಕ್ಷಕಿ ನಾಗಶ್ರೀ ಕಾರ್ಯಕ್ರಮ ನಿರೂಪಿಸಿದರೆ, ಸಹಶಿಕ್ಷಕ ಕೃಷ್ಣ ವಂದಿಸಿದರು.

ವೇದಿಕೆಯಲ್ಲಿ ಬಾಳೆಲೆ ಗ್ರಾ.ಪಂ. ಸದಸ್ಯ ಪೋಡಮಾಡ ಸುಖೇಶ್ ಭೀಮಯ್ಯ, ಬಾಳೆಲೆ ಸಂಯುಕ್ತ ಪ.ಪೂ. ಕಾಲೇಜು ಮುಖ್ಯ ಶಿಕ್ಷಕ ಚಂದ್ರಶೇಖರ್, ಮುಲ್ಲಂಗೆರೆ ಸ.ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕಿ ಡಿ.ಎಸ್. ಪೊನ್ನಮ್ಮ, ಪ್ರತಿಭಾ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿ ರೀನಾ ಉಪಸ್ಥಿತರಿದ್ದರು.